Advertisement

ದೇವಸ್ಥಾನ ಭೇಟಿಗೆ ಅವಕಾಶ ಕಲ್ಪಿಸಿ: ಬಾಂಬೇ ಹೈಕೋರ್ಟ್‌

05:45 PM Aug 14, 2020 | Suhan S |

ಮುಂಬಯಿ, ಆ. 13: ಮಹಾರಾಷ್ಟ್ರ ಸರಕಾರವು ಎಲ್ಲಾ ಧರ್ಮದ ಜನರಿಗೆ ಆಯಾ ಪೂಜಾ ಸ್ಥಳಗಳಿಗೆ ಭೇಟಿ ನೀಡಲು ಅವಕಾಶ ನೀಡಬೇಕು ಎಂದು ಬಾಂಬೆ ಹೈಕೋರ್ಟ್‌ ಮಂಗಳವಾರ ಹೇಳಿದೆ.

Advertisement

ಎಲ್ಲಾ ಧರ್ಮದ ಜನರಿಗೆ ಆಯಾಯ ಪೂಜಾ ಸ್ಥಳಗಳಿಗೆ ತೆರಳಲು ಸ್ವಲ್ಪ ಮಟ್ಟಿಗೆ ಅನುಮತಿ ನೀಡಬೇಕು. ಮದುವೆ ಮತ್ತು ಅಂತ್ಯಕ್ರಿಯೆಗಳಿಗೆ ಜನರನ್ನು ಒಟ್ಟುಗೂಡಿಸಲು ನೀವು ಅನುಮತಿಸುವಾಗ ದೇವಾಲಯಗಳಿಗೆ ತೆರಳಲು ಯಾಕೆ ಅನುಮತಿ ಸಬಾರದು ಎಂದು ನ್ಯಾಯಮೂರ್ತಿಗಳಾದ ಎಸ್‌. ಜೆ. ಕಥವಾಲ್ಲಾ ಮತ್ತು ಮಾಧವ್‌ ಜಮ್ದಾರ್‌ ಅವರನ್ನೊಳಗೊಂಡ ಇಬ್ಬರು ಸದಸ್ಯರ ಹೈಕೋರ್ಟ್‌ ವಿಭಾಗೀಯ ಪೀಠವನ್ನು ಪ್ರಶ್ನಿಸಲಾಯಿತು. ಯಾವುದೇ ಸಮಯದಲ್ಲಿ ದೇವಾಲಯಗಳಲ್ಲಿ ಯಾವುದೇ ಜನಸಮೂಹವು ಸೇರದಂತೆ ನೋಡಿಕೊಳ್ಳಲು, ರಾಜ್ಯ ಸರಕಾರವು ನಿರ್ದಿಷ್ಟ ಸಮಯದ ಸ್ಲಾಟ್‌ಗಳನ್ನು ಮತ್ತು ನಿಗದಿತ ಸಮಯದೊಳಗೆ ದೇವಾಲಯಕ್ಕೆ ಪ್ರವೇಶಿಸಲು ಅನುಮತಿಸಬೇಕಾದ ವ್ಯಕ್ತಿಗಳ ಸಂಖ್ಯೆಯನ್ನು ನಿರ್ಧರಿಸಬಹುದು ಎಂದು ನ್ಯಾಯಪೀಠ ಸೂಚಿಸಿತು.

ರಾಜ್ಯ ಸರಕಾರದ ಅನುಮತಿ ಅಗತ್ಯ ಸಾಮಾಜಿಕ ದೂರವಿಡುವ ಮಾನದಂಡಗಳನ್ನು ಕಾಪಾಡಿಕೊಳ್ಳುವುದು ಸೇರಿದಂತೆ ಕೇಂದ್ರ ಗೃಹ ಸಚಿವಾಲಯ (ಎಂಎಚ್‌ಎ) ನಿಗದಿಪಡಿಸಿದ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು (ಎಸ್‌ಒಪಿ) ಅನುಸರಿಸಿದರೆ ಸಾರ್ವಜನಿಕರಿಗೆ ಅವಕಾಶ ನೀಡಬಹುದು ಎಂದು ಶಿಫಾರಸು ಮಾಡಲಾಗಿದೆ. ಆಗಸ್ಟ್‌ 15 ಮತ್ತು 23 ರ ನಡುವೆ ನಡೆಯಲಿರುವ ವಾರ್ಷಿಕ ಪವಿತ್ರ ಹಬ್ಬಕ್ಕೆ ಜೈನ ದೇವಾಲಯಗಳನ್ನು ತೆರೆಯಲು ಅನುಮತಿ ನೀಡುವಂತೆ ರಾಜ್ಯ ಅಧಿಕಾರಿಗಳಿಗೆ ನಿರ್ದೇಶನ ಕೋರಿ ಭಾಂಡೂಪ್‌ ನಿವಾಸಿ ಅಂಕಿತ್‌ ವೋರಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠ ವಿಚಾರಣೆ ನಡೆಸಿತು. ಸಾಮಾಜಿಕ ದೂರವನ್ನು ಕಾಪಾಡಿಕೊಂಡು ಪೂಜಾ ಸ್ಥಳಗಳನ್ನು ತೆರೆಯಲು ಕೇಂದ್ರ ಸರಕಾರವು ಅನುಮತಿ ನೀಡಿದೆ. ರಾಜ್ಯ ಸರಕಾರವು ಮಹಾರಾಷ್ಟ್ರದ ಧಾರ್ಮಿಕ ದೇವಾಲಯಗಳನ್ನು ತೆರೆಯಲು ಮತ್ತು ಆ ಮಾರ್ಗಸೂಚಿಗಳೊಂದಿಗೆ ಜನತೆ ಹೊರಬರಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಪ್ರತ್ಯೇಕ ಮಾರ್ಗಸೂಚಿ :  ಸಾಂಕ್ರಾಮಿಕದ ಮಧ್ಯೆ ಸಾರ್ವಜನಿಕರು ಮಾನಸಿಕ ಶಾಂತಿಗಾಗಿ ಶ್ರಮಿಸುತ್ತಿರುವಾಗ, ಪೂಜಾ ಸ್ಥಳಗಳಲ್ಲಿ ಪ್ರಾರ್ಥನೆ ಸಲ್ಲಿಸುವುದು ಹೆಚ್ಚು ಅಗತ್ಯವೆಂದು ವೋರಾ ಪರ ವಕೀಲ ಪ್ರಫುಲ್ಲಾ ಷಾ ವಾದಿಸಿದರು. ಮದ್ಯದಂಗಡಿಗಳಿಗೆ ವ್ಯಾಪಾರ ಮಾಡಲು ಅವಕಾಶ ನೀಡಿದಾಗ ಪೂಜಾ ಸ್ಥಳಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ ಎಂದು ಶಾ ದೂರಿದರು. ಅರ್ಜಿಗೆ ಪ್ರತಿಕ್ರಿಯಿಸಿದ ರಾಜ್ಯ ಸರಕಾರದ ಅರ್ಜಿದಾರ ಪೂರ್ಣಿಮಾ ಕಾಂತರಿಯಾ, ಎಲ್ಲಾ ಧರ್ಮಗಳಿಗೆ ಪೂಜಾ ಸ್ಥಳಗಳನ್ನು ತೆರೆಯುವಲ್ಲಿ ಅಧಿಕಾರಿಗಳು ಚಿಂತನೆ ನಡೆಸುತ್ತಿಲ್ಲ ಎಂದು ಸೂಚಿಸಿದರು. ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅನಿಲ್‌ ಸಿಂಗ್‌ ಕೋವಿಡೇತರ ಪ್ರದೆಶದಲ್ಲಿ ಪೂಜೆ ಮಾಡಲು ಕೇಂದ್ರ ಅನುಮತಿ ನೀಡಿದ್ದು, ಜುಲೈ 29 ರಂದು ಅಂತಹ ಸ್ಥಳಗಳಿಗೆ ಪ್ರತ್ಯೇಕ ಮಾರ್ಗ ಸೂಚಿಗಳನ್ನು ಹೊರಡಿಸಿದೆ ಎಂದು ಮನವಿಗೆ ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next