Advertisement
ತಾಲೂಕಿನಲ್ಲಿ ಅಪಾರ ಮಳೆ ಬಂದಿದ್ದರೂಕಳೆದ ಎರಡು ತಿಂಗಳಿಂದ ಬಿಸಿಲಿನ ತಾಪಮಾನಹೆಚ್ಚಾಗಿ ತೋಟಗಳು ಒಣಗಿಹೋಗಿವೆ. ಅಡಿಕೆಮರಗಳಲ್ಲಿ ಹೊಂಬಾಳೆ ಬರುತ್ತಿದೆ. ತೋಟಗಳಿಗೆನೀರು ಹಾಯಿಸುವುದು ಅವಶ್ಯವಾಗಿದೆ.ಆದರೆ, ಬೇಸಿಗೆ ಆರಂಭದಲ್ಲಿಯೇ ವಿದ್ಯುತ್ಸಮಸ್ಯೆ ಹೆಚ್ಚಾಗುತ್ತಿರುವುದು ರೈತರಿಗೆ ತಲೆ ಬಿಸಿಯಾಗುತ್ತಿದೆ.
Related Articles
Advertisement
ಮೋಟರ್ ಸುಟ್ಟರೆ ರೈತ ಸಾಲಗಾರ: ಕೃಷಿಕೋಳವೆ ಬಾವಿಗಳ ಮೋಟರ್ ವಿದ್ಯುತ್ವ್ಯತ್ಯಯದಿಂದ ಸುಟ್ಟು ಹೋದರೆ ಕನಿಷ್ಠ 5 ರಿಂದ15 ಸಾವಿರ ರೂ. ಬೇಕು. ಕೇಬಲ್ ಸುಟ್ಟರೆಮೋಟರ್ ಎತ್ತಿ, ಇಳಿಸಲು ಒಂದು ಲೆಂತ್ ಪೈಪ್ಗೆ ನೂರು ರೂ. ಇದಕ್ಕೆ ಕನಿಷ್ಠ 5 ಸಾವಿರ ಬೇಕು.ರೈತರು ಬದುಕುವುದು ಹೇಗೆ? ಬೆಸ್ಕಾಂ ಅಧಿಕಾರಿಗಳು ಕೊಡುವ ವಿದ್ಯುತ್ನಲ್ಲಿ ಪದೇ ಪದೆವಿದ್ಯುತ್ ತೆಗೆದರೆ ಹೇಗೆ, ಮೋಟರ್, ಕೇಬಲ್ಸುಟ್ಟರೇ ವರ್ಷದ ಆದಾಯ ನೋಡುತ್ತಿರುವರೈತ ಮೋಟರ್ ರಿಪೇರಿಗೆ ಹಣ ಹೇಗೆ ಹೊಂದಿಸಿಕೊಳ್ಳುತ್ತಾನೆ. ಮೋಟಾರ್ ರಿಪೇರಿಗೆಮತ್ತೆ ಸಾಲ ಮಾಡಿ ಬಡ್ಡಿ ಕಟ್ಟಬೇಕಾಗುತ್ತದೆ.ರೈತರ ಕೊಳವೆ ಬಾವಿಗೆ ಏಳು ಗಂಟೆ ವಿದ್ಯುತ್ನೀಡಬೇಕು. ರೈತರು ತೋಟಗಳಿಗೆ ಹೋಗಲುಅನುಕೂಲವಾಗುವ ಸಮಯದಲ್ಲಿ ವಿದ್ಯುತ್ನೀಡಬೇಕು. ಕೊಡುತ್ತಿರುವ ಸಮಯದಲ್ಲಿವಿದ್ಯುತ್ ತೆಗೆಯದೇ ವಿದ್ಯುತ್ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಕರೆ ಸ್ವೀಕರಿಸಿಲ್ಲ : ಚಿಕ್ಕನಾಯಕನಹಳ್ಳಿಯಲ್ಲಿ ವಿದ್ಯುತ್ಸಮಸ್ಯೆಯ ಬಗ್ಗೆ ವಿಚಾರಿಸಲು ಬೆಸ್ಕಾಂ ವ್ಯವಸ್ಥಾಪಕ ಎಂಜಿನೀಯರ್ ಅವರನ್ನು ಉದಯವಾಣಿ ದೂರವಾಣಿಯ ಮೂಲಕ ಸಂಪರ್ಕಿಸಲು ಪ್ರಯತ್ನ ಮಾಡಿದ್ದು, ಅವರುಕರೆಯನ್ನು ಸ್ವೀಕರಿಸಿಲ್ಲ.
ಸರ್ಕಾರದ ಜನವಿರೋಧಿ, ರೈತವಿರೋಧಿ ಕಾರ್ಯಕ್ರಮದಿಂದಜನರಿಗೆ ಬೇಸರವಾಗಿದೆ. ಹೆಚ್ಚು ತೆರಿಗೆಸುಲಿಗೆ, ದುಬಾರಿ ಬೆಲೆಯ ಕೃಷಿ,ವಿದ್ಯುತ್ ಉಪಕರಣಗಳನ್ನುಕೊಳ್ಳಲಾಗದೇ ರೈತರು ನೋವುಅನುಭವಿಸುತ್ತಿದ್ದಾರೆ. ವಿದ್ಯುತ್ಸಮಸ್ಯೆ ಎಂಬ ಮತ್ತೂಂದುಕಾಟಕೊಡಬೇಡಿ, ಸರಿ ಸಮಯಕ್ಕೆವಿದ್ಯುತ್ ನೀಡಬೇಕು. -ಷಡಕ್ಷರಿ ಶಂಕರಲಿಂಗಪ್ಪ, ಪ್ರಗತಿಪರ ಕೃಷಿಕ, ತರಬೇನಹಳ್ಳಿ
-ಚೇತನ್