Advertisement

ಓಟು ಜೊತೆ ನೋಟು ಕೊಡಿ!

10:29 AM Apr 08, 2019 | pallavi |

ಧಾರವಾಡ: ಸ್ಥಳೀಯ ಲೋಕಸಭಾ ಮತಕ್ಷೇತ್ರದ ಎಸ್‌ಯುಸಿಐ (ಕಮ್ಯುನಿಸ್ಟ್‌) ಪಕ್ಷದ ಅಭ್ಯರ್ಥಿ ಗಂಗಾಧರ ಬಡಿಗೇರ ನಗರದ ಮಾರುಕಟ್ಟೆ, ಸಿಬಿಟಿ ಸೇರಿದಂತೆ ವಿವಿಧೆಡೆ ಪ್ರಚಾರ ಕೈಗೊಂಡರು.

Advertisement

ಜನಪರ ಹೋರಾಟಗಳನ್ನು ಬಲಪಡಿಸಲು, ನಿಮ್ಮ ಧ್ವನಿ ಸಂಸತ್‌ನಲ್ಲಿ ಮೊಳಗಿಸಲು “ಓಟು ಕೊಡಿ-ನೋಟು ಕೊಡಿ’ಎಂಬ ಘೋಷ ವಾಕ್ಯದೊಂದಿಗೆ ಕಾರ್ಯಕರ್ತರ ಜೊತೆಗೂಡಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿದರು. ಶರಣು ಗೋನವಾರಮ, ದೀಪಾ, ಲಕ್ಷ್ಮಣ ಜೆ., ರಮೇಶ ಹೊಸಮನಿ, ರಣಜೀತ್‌ ದೂಪದ್‌, ಗಂಗಾ, ವಿಜಯಲಕ್ಷ್ಮೀ ದೇವಮ್ಮ, ಹನುಮೇಶ ಹುಡೇದ, ಶಶಿಕಲಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next