Advertisement

ಬಾವಿಗೆ ಹಾರಿ ಬಾಲಕಿ ಆತ್ಮಹತ್ಯೆ : ಕಾರಣ ನಿಗೂಢ

06:25 PM Feb 05, 2021 | Team Udayavani |

ಬನಹಟ್ಟಿ : ಬಾಗಲಕೋಟೆ ಜಿಲ್ಲೆಯ ರಬಕವಿ – ಬನಹಟ್ಟಿ ತಾಲೂಕಿನ ಬನಹಟ್ಟಿಯಲ್ಲಿ ಸ್ಪಿನ್ನಿಂಗ್ ಮಿಲ್ ಹತ್ತಿರವಿರುವ ಮಹಾದೇವಪ್ಪನ ಬಾವಿಗೆ ಯುವತಿಯೊಬ್ಬಳು ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಮೃತ ಬಾಲಕಿ ಬನಹಟ್ಟಿಯ ಅನಿತಾ ಸುಭಾಸ್ (14) ಎಂದು ತಿಳಿದು ಬಂದಿದ್ದು, ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಬೇಟಿ ನೀಡಿ ತನಿಖೆ ನಡೆಸಿದ್ದಾರೆ.

ಘಟನೆ ವಿವರ : ಅನಿತಾಳ ತಂದೆ ತಾಯಿ ಮೂಲತಃ ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ವಾಸವಾಗಿದ್ದು, ಆಕೆ ಚಿಕ್ಕ ಮಗುವಿದ್ದಾಗಿನಿಂದಲೂ ಬನಹಟ್ಟಿಯ ತನ್ನ ಅಜ್ಜ ಅಜ್ಜಿಯ ಮನೆಯಲ್ಲಿಯೇ ಬೆಳೆದು ದೊಡ್ಡವಳಾಗಿದ್ದು, ಮನೆಯಲ್ಲಿ ಕಾಲು ಚೈನು ಕೊಡಿಸಲು ಆಗ್ರಹಿಸಿದ್ದಳು ಎನ್ನಲಾಗಿದೆ ಅದಕ್ಕೆ ಅವಳ ಸೋದರ ಮಾವ ಕಾಲು ಚೈನು ಆಮೇಲೆ ಕೊಡಿಸುವುದಾಗಿ ಹೇಳಿದ್ದಾರೆ ಆದರೆ ಇಂದು ಶುಕ್ರವಾರ ಮುಂಜಾನೆ ೪ ಗಂಟೆಯ ಹೊತ್ತಿಗೆ ಮನೆ ಬಿಟ್ಟು ಹೋದವಳು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿ:“ಕ್ರಿಕೆಟ್‌ ವಿಲನ್‌’ ಹೆರಾಲ್ಡ್‌ ಲಾರ್‌ವುಡ್‌: ನಾಯಕನ ಮಾತು ಕೇಳಿ ವಿಲನ್ ಆದ ಹೆರಾಲ್ಡ್!

Advertisement

Udayavani is now on Telegram. Click here to join our channel and stay updated with the latest news.

Next