Advertisement

ಹಾವು ಕಚ್ಚಿ ಬಾಲಕಿ ಸಾವು: ಮುಳ್ಳು ಚುಚ್ಚಿತೆಂದು ನಿರ್ಲಕ್ಷ್ಯ!

02:33 PM Mar 29, 2022 | Team Udayavani |

ರಾಯಚೂರು: ಮೇವು ತರಲು ಹೋಗಿದ್ದ ವೇಳೆ ಹಾವು ಕಚ್ಚಿ ಬಾಲಕಿ ಮೃತಪಟ್ಟ ಘಟನೆ ತಾಲೂಕಿನ ಕಾಡ್ಲೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ.

Advertisement

ಗೀತಾಂಜಲಿ (15) ಮೃತ ಬಾಲಕಿ.

ಬೆಳಗ್ಗೆ ಮೇವು ತರಲು ಹೋದ ವೇಳೆ ಬಣವೆಯಲ್ಲಿದ್ದ ಹಾವು ಕಚ್ಚಿದೆ. ಆದರೆ, ಮುಳ್ಳು ಚುಚ್ಚಿರಬಹುದು ಎಂದು ನಿರ್ಲಕ್ಷ್ಯ ವಹಿಸಿದ್ದಾಳೆ.

ಮನೆಗೆ ಬಂದು ಹುಷಾರಿಲ್ಲ ಎಂದು ಮಲಗಿದ್ದು, ಬಳಿಕ ಬಾಯಲ್ಲಿ ನೊರೆ ಬಂದಾಗ ವಿಷಯ ಗೊತ್ತಾಗಿದೆ. ಕೂಡಲೇ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಬಾಲಕಿ ಸಾವನ್ನಪ್ಪಿದ್ದಾಳೆ.

ಇದನ್ನೂ ಓದಿ:ವೃದ್ಧ ದಂಪತಿಗಳ ಕೊಲೆ ಪ್ರಕರಣ: ಮೂವರು ಆರೋಪಿಗಳ ಬಂಧನ

Advertisement

ರಿಮ್ಸ್ ನಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next