Advertisement

ಕಾಡಾನೆ ದಾಳಿಗೆ ಬಾಲಕಿ ಬಲಿ: ಐವರಿಗೆ ಗಾಯ

09:12 PM Apr 08, 2023 | Team Udayavani |

ದಾವಣಗೆರೆ: ಚನ್ನಗಿರಿ ತಾಲೂಕಿನ ಎರಡು ಕಡೆಗಳ ಘಟನೆಗಳಲ್ಲಿ ಕಾಡಾನೆ ದಾಳಿ ಮಾಡಿದ್ದು, ಓರ್ವ ಬಾಲಕಿ ಮೃತಪಟ್ಟು, ಐವರು ಗಾಯಗೊಂಡ ಘಟನೆ ಶನಿವಾರ ಸಂಭವಿಸಿದೆ. ಸಂತೇಬೆನ್ನೂರು ಸಮೀಪದ ಸೋಮಲಾಪುರ ಗ್ರಾಮದ ಜಮೀನಿನಲ್ಲಿ ಕಾಡಾನೆ ದಾಳಿಯಿಂದ 17 ವರ್ಷದ ಕವನ ಎಂಬ ಬಾಲಕಿ ಮೃತಪಟ್ಟಿದ್ದಾಳೆ. ಈಕೆ ತಾಯಿ ಮಂಜುಳಾ ಅವರೊಂದಿಗೆ ಹೊಲದಲ್ಲಿ ತೊಗರಿಕಾಳು ಬಿಡಿಸಲು ಹೋಗಿದ್ದಳು.

Advertisement

ಈ ಸಂದರ್ಭದಲ್ಲಿ ಎರಡು ಆನೆ ಹಾಗೂ ಒಂದು ಮರಿ ಹೊಲಕ್ಕೆ ನುಗ್ಗಿದ್ದವು. ಒಂದು ಆನೆ ಬಾಲಕಿ ಮೇಲೆ ದಾಳಿ ನಡೆಸಿದ್ದು, ತೀವ್ರವಾಗಿ ಗಾಯಗೊಂಡ ಬಾಲಕಿಯನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾಳೆ. ತಾಯಿ ಮಂಜುಳಾ ಗಂಭೀರವಾಗಿ ಗಾಯಗೊಂಡಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ತಾಲೂಕಿನ ಕಾಶೀಪುರ ಗ್ರಾಮದ ದಾರಿಯಲ್ಲಿ ಕಾಡಾನೆ ದಾಳಿ ನಡೆದಿದ್ದು ಬಾಬಾ ನಾಯ್ಕ , ಭಾವಲ್ಯ ನಾಯ್ಕ, ಶಾಂತಿಬಾಯಿ, ಲಕ್ಷಿ$¾àಬಾಯಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next