Advertisement

ನಾಗರ ಹಾವನ್ನು ಬೆನ್ನಟ್ಟಿ ಬಂದ ಬೃಹತ್‌ ಕಾಳಿಂಗ ಸರ್ಪ ಸೆರೆ!

04:46 PM Nov 20, 2018 | |

ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ಅಡಿಕೆ ಮರದ ಲಾಟಿನಲ್ಲಿ ಅಡಗಿದ್ದ 13 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲಾಗಿದೆ.

Advertisement

 ಚೈತ್ರಾ ಕುಮಾರ್‌ ಎನ್ನುವವರ ಮನೆಯಲ್ಲಿ ನಾಗರ ಹಾವನ್ನು ಬೆನ್ನಟ್ಟಿ ಬಂದ ಕಾಳಿಂಗ  ಒಂದು ವಾರದಿಂದ ಮನೆಯ ಹತ್ತಿರದ ಅಡಿಕೆ ಲಾಟಿನಲ್ಲಿ ಅಡಗಿ ಕುಳಿತಿತ್ತು. 

ಮನೆಯವರು ಸ್ಥಳೀಯ ಉರಗ ತಜ್ಞ ಹರೀಂದ್ರಗೆ ಕರೆ ಮಾಡಿ ಕಾಳಿಂಗ ಸರ್ಪ ಹಿಡಿಯುವಂತೆ ಮನವಿ ಮಾಡಿದ್ದರು.

ಸ್ಥಳಕ್ಕೆ ಆಗಮಿಸಿದ ಹರೀಂದ್ರ ಅವರು ಸತತ ಒಂದು ಗಂಟೆ ಕಾರ್ಯಾಚರಣೆ ನಡೆಸಿ ಕಾಳಿಂಗ ಸರ್ಪವನ್ನು ಸೆರೆ ಹಿಡಿದಿದ್ದಾರೆ. ನಂತರ ಅರಣ್ಯ ಸಿಬ್ಬಂದಿ ನೇತೃತ್ವದಲ್ಲಿ ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next