Advertisement

ಘಾಟ್‌ಕೋಪರ್‌ ಕನ್ನಡ ವೆಲ್ಫೇರ್‌ ಸೊಸೈಟಿ ದಾನಿಗಳಿಗೆ ಸಮ್ಮಾನ

03:53 PM Oct 07, 2017 | Team Udayavani |

ಮುಂಬಯಿ: ಸುವರ್ಣ ಮಹೋ ತ್ಸವದ ಸಂಭ್ರಮದಲ್ಲಿರುವ ಕನ್ನಡ ವೆಲ್ಫೇರ್‌ ಸೊಸೈಟಿ ಇದರ ನೂತನ ಮಹೇಶ್‌ ಎಸ್‌. ಶೆಟ್ಟಿ (ಬಾಬಾಸ್‌ ಗ್ರೂಪ್‌) ಹವಾನಿಯಂತ್ರಿತ ಸಭಾಗೃಹದ ಉದ್ಘಾಟನ ಸಮಾರಂಭವು ಸೆ. 27 ರಂದು  ಘಾಟ್‌ಕೋಪರ್‌ ಪೂರ್ವ ಪಂತ್‌ನಗರದಲ್ಲಿ ನಡೆಯಿತು.

Advertisement

ಉದ್ಘಾಟಕರಾಗಿ ಆಗಮಿಸಿದ ಬಾಬಾಸ್‌ ಗ್ರೂಪ್‌ನ ಸಿಎಂಡಿ, ಮಹಾದಾನಿ ಮಹೇಶ್‌ ಶೆಟ್ಟಿ ಹಾಗೂ ವೆಲ್‌ಕಂ ಪ್ಯಾಕೇಜಿಂಗ್‌ ಇಂಡಸ್ಟ್ರೀನ್‌ ಮಾಲಕ ರವೀಂದ್ರನಾಥ ಎಂ. ಭಂಡಾರಿ ಅವರನ್ನು ಸಂಸ್ಥೆಯ ವತಿಯಿಂದ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು.

ಸಮಾರಂಭದ ವೇದಿಕೆಯಲ್ಲಿ ಮಹಾರಾಷ್ಟ್ರ ರಾಜ್ಯ ವಸತಿ ಸಚಿವ ಪ್ರಕಾಶ್‌ ಮೆಹ್ತಾ, ವಿಶ್ವ ಬಂಟರ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಯಕ್ಷಧ್ರುವ ಪಟ್ಲ ಫೌಂಡೇಷನ್‌ ಮುಂಬಯಿ ಘಟಕ ಮುಂಬಯಿ ಅಧ್ಯಕ್ಷ ಕಡಂದಲೆ ಸುರೇಶ್‌ ಭಂಡಾರಿ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್‌. ಶೆಟ್ಟಿ, ಕನ್ನಡ ವೆಲ್ಫೆàರ್‌ ಸೊಸೈಟಿಯ ಅಧ್ಯಕ್ಷ ನವೀನ್‌ ಶೆಟ್ಟಿ ಇನ್ನಬಾಳಿಕೆ, ಸ್ಟೀವನ್‌ ಫುರ್ಟಾಡೋ, ಸಂಸ್ಥೆಯ ಉಪಾಧ್ಯಕ್ಷ ಜಯರಾಜ ಜೈನ್‌, ಗೌರವ ಕಾರ್ಯದರ್ಶಿ ಸುಧಾಕರ ಯೆಲ್ಲೂರು, ಕೋಶಾಧಿಕಾರಿ ರಘುನಾಥ್‌ ಶೆಟ್ಟಿ, ಜತೆ ಕಾರ್ಯದರ್ಶಿ ರಮಾನಂದ ಶೆಟ್ಟಿ, ಜತೆ ಕೋಶಾಧಿಕಾರಿ ಪೀಟರ್‌ ರೋಡ್ರಿಗಸ್‌, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಆಶಾ ಜಿ. ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ನಾರಾಯಣ ಶೆಟ್ಟಿ ನಂದಳಿಕೆ, ಮಾಜಿ ಅಧ್ಯಕ್ಷ ವಿದ್ಯಾನಂದ ರೈ, ಅಶೋಕ್‌ ಪಕ್ಕಳ, ಜಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

 ಚಿತ್ರ-ವರದಿ: ಸುಭಾಷ್‌ ಶಿರಿಯಾ
 

Advertisement

Udayavani is now on Telegram. Click here to join our channel and stay updated with the latest news.

Next