Advertisement
ಜಿಲ್ಲೆಯಿಂದ ಸಾಮಾನ್ಯವಾಗಿ ಶಿರಾಡಿ, ಸಂಪಾಜೆ ಮತ್ತು ಚಾರ್ಮಾಡಿ ಘಾಟಿ ಮೂಲಕ ಬೆಂಗಳೂರಿಗೆ ಪ್ರಯಾಣ. ಆದರೆ ಈಗ ಸಂಪಾಜೆ ಮತ್ತು ಶಿರಾಡಿ ಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಬೆಂಗಳೂರಿಗೆ ಈಗಿರುವ ಸನಿಹದ ಮಾರ್ಗ ಚಾರ್ಮಾಡಿ. ಇಲ್ಲಿ ಪ್ರಸ್ತುತ ವಾಹನ ದಟ್ಟಣೆ ಹೆಚ್ಚಾಗಿದೆ. ಇಲ್ಲೂ ಮಳೆ ಆಗುತ್ತಿರುವುದರಿಂದ ಗುಡ್ಡ ಕುಸಿತದ ಭೀತಿ ಇದೆ.
ಚಾರ್ಮಾಡಿ ರಸ್ತೆಯಲ್ಲಿ ಈಗ ಕೇವಲ ಎಕ್ಸ್ಪ್ರೆಸ್ ಬಸ್ಗಳು ಮಾತ್ರ ಸಂಚರಿಸುತ್ತಿವೆ. ಶಿರಾಡಿ ಘಾಟಿ ಮತ್ತು ಸಂಪಾಜೆ ಘಾಟಿ ಸಂಚಾರಕ್ಕೆ ಮುಕ್ತವಾಗುವವರೆಗೆ ಮಂಗಳೂರಿನಿಂದ ಬೆಂಗಳೂರು ಸಂಪರ್ಕಿಸಲು ಕಾರ್ಕಳ- ಎಸ್.ಕೆ. ಬಾರ್ಡರ್, ಕುದುರೆಮುಖ- ಕಳಸ- ಕೊಟ್ಟಿಗೆಹಾರ- ಮೂಡಿಗೆರೆ-ಹಾಸನ (438 ಕಿ.ಮೀ.) ಮೂಲಕವಾಗಿ ಕೆಎಸ್ಸಾರ್ಟಿಸಿ ವೋಲ್ವೋ ಬಸ್ಗಳ ಸಂಚಾರವನ್ನು ಪ್ರಾರಂಭಿಸಲಾಗಿದೆ.
Related Articles
Advertisement
ನೆಟ್ ವರ್ಕ್ ಇಲ್ಲದೆ ಪರದಾಟಜಿಲ್ಲೆಯಲ್ಲಿ ಕೊಡಗಿನ ವಿದ್ಯಾರ್ಥಿಗಳು, ಉದ್ಯೋಗಿಗಳಿದ್ದಾರೆ. ಕೊಡಗಿನಲ್ಲಿ ದ.ಕ. ಮೂಲದ ಹಲವರಿದ್ದಾರೆ. ಈಗ ಸಂಪಾಜೆ ಘಾಟಿ ಬಂದ್ ಆಗಿದೆ. ಬದಲಿಯಾಗಿ ಇರುವ ಕಾಡಂಚಿನ ರಸ್ತೆ ಗಳಾದ ಸುಳ್ಯ-ಕಲ್ಲಪಳ್ಳಿ-ಪಾನತ್ತೂರು- ಕರಿಕೆ-ಭಾಗಮಂಡಲ-ಮಡಿಕೇರಿ ಅಥವಾ ಸುಳ್ಯ- ಅರಂತೋಡು- ತೊಡಿಕಾನ-ಪಟ್ಟಿ-ಭಾಗಮಂಡಲ-ಮಡಿಕೇರಿ ರಸ್ತೆಗಳಲ್ಲಿ ಮರ ಬಿದ್ದು ಬ್ಲಾಕ್ ಆಗಿದೆ. ‘ಈ ರಸ್ತೆಗಳಲ್ಲಿ ಸಂಚಾರ ಅಸಾಧ್ಯ. ಜೀಪು ಮಾತ್ರ ಕಷ್ಟಪಟ್ಟು ಸಂಚರಿಸಬಹುದು. ಆದರೆ ಈಗ ಅಲ್ಲಲ್ಲಿ ಮರ ಬಿದ್ದಿರುವುದರಿಂದ ಸಂಚಾರ ಅಪಾಯ ಎನ್ನುತ್ತಾರೆ ಸ್ಥಳೀಯ ದುರ್ಗಾಪ್ರಸಾದ್. ಮಡಿಕೇರಿ ಮುಖ್ಯ ನಗರದಲ್ಲಿ ಮಾತ್ರ ವಿದ್ಯುತ್ ಸಂಪರ್ಕ ಇದೆ. ಉಳಿದಂತೆ ನೆಟ್ವರ್ಕ್ ಇಲ್ಲದೆ, ಮನೆಯವರೊಂದಿಗೆ ಸಂಪರ್ಕಕ್ಕಾಗಿ ಜನ ಪರದಾಡುತ್ತಿದ್ದಾರೆ. ಇರುವ ಪರ್ಯಾಯ ರಸ್ತೆಗಳೂ ಅಲ್ಲಲ್ಲಿ ಮರ ಬಿದ್ದು ಸಂಪರ್ಕ ಕಡಿತಗೊಂಡಿವೆ.
– ಉಮೇಶ್ ದೇವ ಗುತ್ತಿಗಾರು, ಮಡಿಕೇರಿಯಲ್ಲಿರುವ ಸುಳ್ಯ ಮೂಲದ ಉದ್ಯೋಗಿ — ಧನ್ಯಾ ಬಾಳೆಕಜೆ