Advertisement

ಲಸಿಕೆ ಪಡೆಯಿರಿ: ಜಗ್ಗಿ ವಾಸುದೇವ್‌

12:20 AM Apr 30, 2021 | Team Udayavani |

ಬೆಂಗಳೂರು: ಸರಕಾರ  ಕೋವಿಡ್‌ ಲಸಿಕೆ ನೀಡುತ್ತಿದ್ದು, ಕೆಲವರು ಅದನ್ನು ನಿರ್ಲಕ್ಷಿಸುತ್ತಿದ್ದಾರೆ. ಲಸಿಕೆ ನಮ್ಮನ್ನು ಕಾಪಾಡಲಿದ್ದು,  ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಈಶ ಫೌಂಡೇಶನ್‌ ಮುಖ್ಯಸ್ಥ ಸದ್ಗುರು ಜಗ್ಗಿ ವಾಸುದೇವ್‌  ಹೇಳಿದ್ದಾರೆ.

Advertisement

ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದ ಅವರು, ಯೋಗಕ್ಕೆ ರೋಗ ನಿರೋಧಕ ಶಕ್ತಿಯಿದ್ದು, ಆರೋಗ್ಯ ಸಂರಕ್ಷಣೆ ದೃಷ್ಟಿಯಿಂದ ಎಲ್ಲರೂ ಪ್ರತಿನಿತ್ಯ ಯೋಗ ಮಾಡಬೇಕು. ಯೋಗಕ್ಕೆ ಹಲವು ರೋಗಗಳನ್ನು ಗುಣಪಡಿಸುವ ಶಕ್ತಿಯಿದೆ. ಪ್ರತಿ ನಿತ್ಯ 90-120 ನಿಮಿಷದ ವರೆಗೆ ಸೂರ್ಯ ನಮಸ್ಕಾರ, ಅಷ್ಟಾಂಗ ನಮಸ್ಕಾರ, ಸಿಂಹ ಕ್ರಿಯೆ ಮುಂತಾದ  ಯೋಗಾಸಗಳನ್ನು ಮಾಡುವಂತೆ ವಿನಂತಿಸಿಕೊಂಡರು. ಕೋವಿಡ್‌ ಸೋಂಕು ತೀವ್ರವಾಗಿ ರುವ ಈ ಹೊತ್ತಿನಲ್ಲಿ  ವಿಮರ್ಶೆ-ಟೀಕೆಗಳನ್ನು ಮಾಡುವುದನ್ನು ಬಿಟ್ಟು ಅಪಾಯದಲ್ಲಿದ್ದವರನ್ನು ರಕ್ಷಣೆಗೆ ಶ್ರಮಿ ಸಬೇಕಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next