Advertisement

ಪ್ಯಾಕೇಜ್‌ಗೆ ಕೇಂದ್ರದ ನೆರವು ಪಡೆಯಿರಿ: ಕುಮಾರಸ್ವಾಮಿ

11:27 AM May 12, 2020 | Team Udayavani |

ಬೆಂಗಳೂರು: ಲಾಕ್‌ ಡೌನ್‌ನಿಂದ ಸಂಕಷ್ಟಕ್ಕೊಳಗಾದ ರಾಜ್ಯದ ಶ್ರಮಿಕರು, ರೈತರು, ಬಡವರಿಗೆ ಪ್ಯಾಕೇಜ್‌ ನೀಡಲು ಕೇಂದ್ರ ಸರ್ಕಾರದ ನೆರವು ಪಡೆಯಲು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.  ಈ ಕುರಿತು ಟ್ವೀಟ್‌ ಮಾಡಿ, ರಾಜ್ಯಕ್ಕೆ ಕೋವಿಡ್‌ ಪ್ಯಾಕೇಜ್‌ ನೀಡುವಂತೆ ಪ್ರಧಾನಿ ಮೋದಿ ಅವರನ್ನು ಸಿಎಂ ಯಡಿಯೂರಪ್ಪ ಆಗ್ರಹಿಸ ಬೇಕು. ಕೊರೊನಾ ವಿರುದದ ಹೋರಾಟ ಕ್ಕಾಗಿ ಕೇಂದ್ರ ಸರ್ಕಾರ ನಿಧಿ  ಸ್ಥಾಪಿಸಿದೆ. ಇದಕ್ಕೆ ಸಂಸದರಾದಿಯಾಗಿ, ಉದ್ಯಮಿ ಗಳು, ನಾಗರಿ  ಕರು ಉದಾರ ದೇಣಿಗೆ ನೀಡಿದ್ದಾರೆ.

Advertisement

ಹೀಗಿದ್ದೂ ಕೇಂದ್ರದಿಂದ ರಾಜ್ಯಕ್ಕೆ ಈವರೆಗೆ ಸೂಕ್ತ ಆರ್ಥಿಕ ನೆರವು ಬಂದಿಲ್ಲ ಎಂದಿದ್ದಾರೆ. ಕೋವಿಡ್‌ ಪ್ಯಾಕೇಜ್‌  ಜೊತೆಗೆ ಜಿಎಸ್‌ಟಿ ಬಾಕಿ, ನೆರೆ-ಬರ ಪರಿಹಾರ ಸೇರಿ ಕೇಂದ್ರದಿಂದ ಬರಬೇಕಾದ ಇತರ ಬಾಕಿ ಹಣದ ಬಗ್ಗೆಯೂ ಕೇಂದ್ರವನ್ನು ಕೇಳಬೇಕು. ರಾಜ್ಯ ಹಣಕಾಸಿನ ತೊಂದರೆ ಅನುಭವಿಸುತ್ತಿದೆ. ಈ ಸಂದರ್ಭದಲ್ಲಿ ಕೇಂದ್ರದಿಂದ ಸೂಕ್ತ ನೆರವು ಬಾರದ ಹೊರತು ಕೋವಿಡ್‌ ನಿಯಂತ್ರಣ ಕಷ್ಟವಾಗಲಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next