Advertisement

ಮಧ್ಯಪ್ರದೇಶದಲ್ಲಿ “ಸಂತಾನಹರಣ’ವಿವಾದ!

10:23 AM Feb 23, 2020 | Team Udayavani |

ಭೋಪಾಲ್‌ (ಮಧ್ಯಪ್ರದೇಶ): ಮಧ್ಯಪ್ರದೇಶದ ಕಮಲ್‌ನಾಥ್‌ ಸರ್ಕಾರ ಮುಜುಗರದ ಸನ್ನಿವೇಶವೊಂದಕ್ಕೆ ತುತ್ತಾಗಿದೆ.

Advertisement

ಸಂತಾನಹರಣ ಮಾಡಿಸಿಕೊಳ್ಳುವಂತೆ ಪುರುಷರ ಮನವೊಲಿ ಸಲು ಅಲ್ಲಿನ ಆರೋಗ್ಯ ಕಾರ್ಯಕರ್ತರು ಪೂರ್ಣವಾಗಿ ವಿಫ‌ಲವಾಗಿರುವ ಹಿನ್ನೆಲೆಯಲ್ಲಿ, ಅವರ ವೇತನ ತಡೆಹಿಡಿಯುವ, ಸ್ವಯಂ ನಿವೃತ್ತಿ ನೀಡುವ ಆದೇಶವನ್ನು ರಾಜ್ಯಸರ್ಕಾರ ಹೊರಡಿಸಿತ್ತು. ಇದು ತುರ್ತು ಪರಿಸ್ಥಿತಿ ಎಂದು ರಾಜ್ಯ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಆದೇಶವನ್ನು ಹಿಂಪಡೆಯಲಾಗಿದೆ.

2019-20ರ ಅವಧಿಯಲ್ಲಿ ಮಧ್ಯಪ್ರದೇಶದಲ್ಲಿ ಕೇವಲ ಶೇ.0.5ರಷ್ಟು ಪುರುಷರು ಮಾತ್ರ ಸಂತಾನಹರಣ ಶಸ್ತ್ರಚಿಕಿತ್ಸೆ ಗೊಳಗಾಗಿದ್ದಾರೆ. ಇದು ಸಂಪೂರ್ಣ ವೈಫ‌ಲ್ಯದ ಸಂಕೇತ. ಜಿಲ್ಲಾ ಮಟ್ಟದ ಶಿಬಿರಗಳಲ್ಲಿ ಕನಿಷ್ಠ 5ರಿಂದ 10 ಪುರುಷರನ್ನು ಸಂತಾನಹರಣ ಕ್ಕೊಳಪಡಿಸಬೇಕು. ಇಲ್ಲದಿದ್ದರೆ, ನೀವು ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ ಎಂದು ಆದೇಶದಲ್ಲಿ ಹೇಳಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next