Advertisement

ಮಾರ್ಚ್‌ನಲ್ಲಿ ಮಹಾ ಚುನಾವಣೆ: ಇಬ್ರಾಹಿಂ

09:40 AM Oct 29, 2019 | Team Udayavani |

ವಿಜಯಪುರ:ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ನೆಲ ಕಚ್ಚುವುದು ಖಚಿತ. ಇದು ಒಂದೆಡೆ ಇರಲಿ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಮಹಾ ಚುನಾವಣೆಯೇ ನಡೆಯಲಿದೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಇಬ್ರಾಹಿಂ ಭವಿಷ್ಯ ನುಡಿದರು.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಪ್ರಳಯ ಸದೃಶ್ಯ ಮಳೆ ಸುರಿದಿದೆ. ಸಂತ್ರಸ್ತರ ನೋವು ರಾಜ್ಯ ಸರ್ಕಾರದ ಕಣ್ಣಿಗೆ ಕಾಣುತ್ತಿಲ್ಲ. ಸಂತ್ರಸ್ತರ ನೋವಿಗೆ ಸ್ಪಂದಿಸಬೇಕಾದ ಸರ್ಕಾರ ತನ್ನ ಜವಾಬ್ದಾರಿ ಮರೆತು ಬಿಟ್ಟಿದೆ. ಬಿಜೆಪಿಯಲ್ಲಿ ಸಿಎಂ ಯಡಿಯೂರಪ್ಪ ಒಲ್ಲದ ಗಂಡನಂತಂತಾಗಿದ್ದಾರೆ. ಅವರಿಗೆ ಕೇಂದ್ರ ಸರ್ಕಾರ ಸಾಥ್‌ ನೀಡುತ್ತಿಲ್ಲ. ಮೋದಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವುದು ಒಂದೆಡೆ ಇರಲಿ ಮನ್‌ ಕೀ ಬಾತ್‌ನಲ್ಲಿಯೂ ಸಂತ್ರಸ್ತರಿಗೆ ಧೈರ್ಯ ಹೇಳುವ ಸಾಹಸ ಮಾಡಿಲ್ಲ ಎಂದರು.

ಟಿಪ್ಪು ಜಯಂತಿಯನ್ನು ಸರ್ಕಾರವೇ ಆಚರಿಸಬೇಕೆಂಬ ನಿಬಂಧನೆ ಇಲ್ಲ. ಟಿಪ್ಪು ಜಯಂತಿಯನ್ನು ಆಚರಿಸುವುದು ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಬಿಡಿ, ಇಸ್ಲಾಂ ಧರ್ಮದಲ್ಲಿ ಜಯಂತಿ ಆಚರಣೆಗೆ ಅವಕಾಶವಿಲ್ಲ, ಹೀಗಾಗಿ ಧಾರ್ಮಿಕ ಪರಿದಿ ಯೊಳಗೆ ನಾವು ಜಯಂತಿಯನ್ನು ಆಚರಿಸುತ್ತೇವೆ. ವಿನಾಕಾರಣ ಈ ವಿಷಯವಾಗಿ ವಿವಾದ ಸೃಷ್ಟಿಸಿ ಟಿಪ್ಪು ಮನಸ್ಸಿಗೂ ನೋವುಂಟು ಮಾಡುವ ಕೆಲಸ ನಡೆಯಬಾರದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next