Advertisement

ತುಮಕೂರಿನಲ್ಲಿ ಜಿಲೆಟಿನ್‌ ಕಡ್ಡಿ ಸಿಡಿದು ಮನೆಗೆ ಹಾನಿ

09:57 PM Feb 03, 2021 | Team Udayavani |

ತುಮಕೂರು: ಕ್ರಷರ್‌ ಹಾಗೂ ಕಲ್ಲು ಬಂಡೆಗಳನ್ನು ಸ್ಫೋಟಿಸುವ ಜಿಲೆಟಿನ್‌ ಕಡ್ಡಿ ಸ್ಫೋಟಿಸಿ ಶೀಟಿನ ಮನೆಗೆ ಹಾನಿಯಾಗಿದ್ದು, ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತುಮಕೂರು ತಾಲೂಕಿನ ಮಸ್ಕಲ್‌ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

Advertisement

ತಾಲೂಕಿನ ಹೆಬ್ಬೂರು ಠಾಣೆ ವ್ಯಾಪ್ತಿಯ ಹೊನ್ನುಡಿಕೆ ಬಳಿ ಇರುವ ಮಸ್ಕಲ್‌ ಗ್ರಾಮದ ಲಕ್ಷ್ಮೀಕಾಂತ್‌ ಎಂಬುವರ ಮನೆ ಜಿಲೆಟಿನ್‌ ಕಡ್ಡಿ ಸ್ಫೋಟಗೊಂಡು ಸಂಪೂರ್ಣ ಧ್ವಂಸವಾಗಿದ್ದು, ಶೀಟಿನ ಮನೆ ಛಾವಣಿ ಸೀಟುಗಳು ನಾಶವಾಗಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಫೋಟದಿಂದ ಮನೆಯಲ್ಲಿದ್ದ ಲಕ್ಷಿ¾àಕಾಂತ ಅವರ ಪತ್ನಿ ಸುವರ್ಣಮ್ಮ ಎಂಬುವರ ತಲೆಗೆ ಸೀಟಿನ ಚೂರುಗಳು ಅಪ್ಪಳಿಸಿರುವ ಪರಿಣಾಮ ಈಕೆ ತೀವ್ರವಾಗಿ ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳ್ಳಿಪಾಳ್ಯದ ಬಳಿ ಶಾಲೆಯೊಂದರ ಕಾಂಪೊಂಡ್‌ ಅಡಿಪಾಯ ತೆಗೆಯಲು ಲಕ್ಷ್ಮೀಕಾಂತ್‌ ಒಪ್ಪಂದ ಮಾಡಿಕೊಂಡಿದ್ದು, ಪಾಯ ತೆಗೆಯುವಾಗ ಕಲ್ಲುಬಂಡೆ ಸಿಕ್ಕಿವೆ. ಈ ಬಂಡೆಯನ್ನು ಸಿಡಿಸಲೆಂದು ಜಿಲೆಟಿನ್‌ ಕಡ್ಡಿ ಬಳಸಿದ್ದು, ಉಳಿದ ಜಿಲೆಟಿನ್‌ ಕಡ್ಡಿಗಳನ್ನು ಮನೆಯಲ್ಲಿ ಇಟ್ಟಿದ್ದರು ಎನ್ನಲಾಗಿದೆ.

ಶೀಟು ಮನೆಯಾಗಿದ್ದರಿಂದ ಬಿಸಿಲಿನ ತಾಪಕ್ಕೆ ಜಿಲೆಟಿನ್‌ ಕಡ್ಡಿ ಕಾದು ಹೊಗೆ ಬಂದಿದೆ. ಆ ಸಂದರ್ಭದಲ್ಲಿ ಮನೆಯಲ್ಲಿದ್ದ ಮಕ್ಕಳು ಇದನ್ನು ಕಂಡು ಹೊರಗೆ ಓಡಿ ಬಂದಿದ್ದಾರೆ. ಇದಾದ ಸ್ವಲ್ಪ ಹೊತ್ತಿನ ಬಳಿಕ ಸ್ಫೋಟಗೊಂಡು ಮನೆ ಧ್ವಂಸವಾಗಿದೆ. ಈ ಘಟನೆ ನಡೆದ ಬಳಿಕ ಲಕ್ಷ್ಮೀಕಾಂತ್‌ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದರು.

ಇದನ್ನೂ ಓದಿ : 25 ಸಂಸದರನ್ನು ನೀಡಿದ ರಾಜ್ಯಕ್ಕೆ ಅನ್ಯಾಯ : ಎಂ.ಲಕ್ಷ್ಮಣ್‌ ಆಕ್ರೋಶ

Advertisement

ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ, ಅಡಿಷನಲ್‌ ಎಸ್ಪಿ ಉದೇಶ್‌, ಡಿವೈಎಸ್ಪಿ ಎಚ್‌. ಶ್ರೀನಿವಾಸ್‌, ಕ್ಯಾತ್ಸಂದ್ರ ಸಿಪಿಐ ಸಚನ್ನೇಗೌಡ ಹಾಗೂ ಹೆಬ್ಬೂರು ಸಬ್‌ಇನ್ಸ್‌ಪೆಕ್ಟರ್‌ ದೇವಿಕಾದೇವಿ ಭೇಟಿ ನೀಡಿ ಪರಿಶೀಲಿಸಿದರು. ಲಕ್ಷ್ಮೀಕಾಂತ ಅವರ ಮನೆಯ ಸುತ್ತಮುತ್ತ 200 ಮೀಟರ್‌ ನಿಷೇಧಾಜ್ಞೆ ಹೊರಡಿಸಿದ್ದು, ಮನೆಯಲ್ಲಿ ಇನ್ನು ಜಿಲೆಟಿನ್‌ ಕಡ್ಡಿಗಳು ಇರುವ ಬಗ್ಗೆ  ಅನುಮಾನಗಳು ಮೂಡಿದ್ದು, ಸ್ಥಳಕ್ಕೆ ಬಾಂಬ್‌ ನಿಷ್ಕಿಯ ದಳದ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next