Advertisement

GDP ಬೈಬಲ್ ಅಥವಾ ಮಹಾಭಾರತ ಅಲ್ಲ, ಭವಿಷ್ಯದಲ್ಲಿ ಜಿಡಿಪಿ ಮುಖ್ಯವೂ ಅಲ್ಲ: ಬಿಜೆಪಿ ಸಂಸದ ದುಬೆ

09:54 AM Dec 03, 2019 | Nagendra Trasi |

ನವದೆಹಲಿ:ದೇಶದ ಆರ್ಥಿಕ ಸ್ಥಿತಿಗತಿಯನ್ನು ಸೂಚಿಸುವ ಜಿಡಿಪಿ(ಒಟ್ಟು ದೇಶೀಯ ಉತ್ಪಾದನೆ) ದರ ತೀವ್ರ ಇಳಿಕೆಯಾದ ಬೆನ್ನಲ್ಲೇ ಭವಿಷ್ಯದಲ್ಲಿ ಜಿಡಿಪಿಯನ್ನು ನಿಲ್ಲಿಸುವುದೇ ಸಮರ್ಪಕವಾಗಲಿದೆ. ಜಿಡಿಪಿಗಿಂತ ಮುಖ್ಯವಾದದ್ದು ಜನರು ಹೆಚ್ಚು ಸಂತೋಷವಾಗಿದ್ದಾರೆಯೇ ಎಂಬುದು ಗಮನಾರ್ಹವಾದುದು ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಸೋಮವಾರ ಲೋಕಸಭೆಯಲ್ಲಿ ಮತಾನಾಡುತ್ತ ತಿಳಿಸಿದ್ದಾರೆ.

Advertisement

ಜಿಡಿಪಿ ಕಲ್ಪನೆ ಆರಂಭವಾಗಿದ್ದು 1943ರಲ್ಲಿ. ಅದಕ್ಕು ಮೊದಲು ಜಿಡಿಪಿ ಇರಲಿಲ್ಲವಾಗಿತ್ತು. ಆ ನಿಟ್ಟಿನಲ್ಲಿ ಜಿಡಿಪಿಯನ್ನೇ ಬೈಬಲ್, ರಾಮಾಯಣ ಅಥವಾ ಮಹಾಭಾರತದ ರೀತಿ ಪರಿಗಣಿಸುವುದರಲ್ಲಿ ಯಾವುದೇ ಉಪಯೋಗವಿಲ್ಲ. ಇನ್ಮುಂದೆ ಭವಿಷ್ಯದಲ್ಲಿ ಜಿಡಿಪಿಯನ್ನು ಆರ್ಥಿಕ ಸೂಚ್ಯಂಕ ಎಂಬಂತೆ ಬಿಂಬಿಸುವುದು ಹೆಚ್ಚು ಉಪಯೋಗಕ್ಕೆ ಬರುವುದಿಲ್ಲ ಎಂದು ದುಬೆ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಸಮಾಜದ ಏಳಿಗೆಗೆ ನೆರವಾಗಬಲ್ಲ ಆರ್ಥಿಕತೆ ಮುಂದುವರಿಯುತ್ತಿರುವಾಗ ಅದರ ಲಾಭ ಜನಸಾಮಾನ್ಯರಿಗೆ ದೊರೆಯಬೇಕು. ಅಭವೃದ್ಧಿಯ ಏಳಿಗೆ ಹೀಗೆ ಜಿಡಿಪಿಗಿಂತ ಸಂತೋಷವೇ ಹೆಚ್ಚು ಮುಖ್ಯವಾಗಲಿದೆ ಎಂದು ದುಬೆ ತಮ್ಮದೇ ಹೊಸ ಸಿದ್ದಾಂತದ ಮೂಲಕ ವಿವರಣೆ ನೀಡಿರುವುದಾಗಿ ವರದಿ ವಿವರಿಸಿದೆ.

ಕಳೆದ ಗುರುವಾರ ಬಿಡುಗಡೆಗೊಂಡ 2ನೇ ತ್ರೈಮಾಸಿಕ ಜಿಡಿಪಿ ದರ ಶೇ.4.5ಕ್ಕೆ ಕುಸಿದಿತ್ತು. ಇದು ಕಳೆದ ಆರು ವರ್ಷಗಳಿಗಿಂತ ಕಡಿಮೆ ಪ್ರಮಾಣದ ಜಿಡಿಪಿ ಕುಸಿತವಾಗಿದ್ದು, ಈ ಬಗ್ಗೆ ಆರ್ಥಿಕ ತಜ್ಞರು ದೇಶದ ಆರ್ಥಿಕ ಅಭಿವೃದ್ಧಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next