Advertisement

Team India; ದ್ರಾವಿಡ್‌ ಸಂದೇಶ ನೋಡಿ ಗೌತಮ್‌ ಗಂಭೀರ್‌ ಭಾವುಕ

10:40 AM Jul 28, 2024 | Team Udayavani |

ನವದೆಹಲಿ: ಶನಿವಾರದಿಂದ ಭಾರತ-ಶ್ರೀಲಂಕಾ ನಡುವೆ ಟಿ20 ಮೂಲಕ ಪ್ರವಾಸ ಸರಣಿ ಆರಂಭವಾಗಿದೆ. ಈ ಸರಣಿ ಮೂಲಕ ಭಾರತ ತಂಡದ ಕೋಚ್‌ ಆಗಿ ಕಾರ್ಯಾರಂಭ ಮಾಡಿರುವ ಗೌತಮ್‌ ಗಂಭೀರ್‌ಗೆ (Gautam Gambhir) ತಂಡದ ಹಿಂದಿನ ಕೋಚ್‌, ಮಹಾಗೋಡೆ ಖ್ಯಾತಿಯ, ಕನ್ನಡಿಗ ರಾಹುಲ್‌ ದ್ರಾವಿಡ್‌ರಿಂದ (Rahul dravid) ಅಚ್ಚರಿಯ ಸಂದೇಶವೊಂದು ಲಭಿಸಿದೆ.  ಟ್ವಿಟರ್‌ ನಲ್ಲಿ ಬಿಸಿಸಿಐನ ವಿಡಿಯೋ ಸಂದೇಶವನ್ನು ನೋಡಿ ಗಂಭೀರ್‌ ಭಾವುಕರಾಗಿದ್ದಾರೆ.

Advertisement

“ಅತ್ಯಂತ ಉದ್ವಿಗ್ನ ಸ್ಥಿತಿಯಲ್ಲಿ ಉಸಿರನ್ನು ಹೊರಚೆಲ್ಲಿ, ಒಂದು ಹೆಜ್ಜೆ ಹಿಂದಿಡಿ. ಗೌತಮ್‌ ನಿಮಗೆ ಶುಭವಾಗಲಿ. ನಿಮಗೆ ಎಷ್ಟೇ ಕಷ್ಟವಾದರೂ ನಕ್ಕುಬಿಡಿ. ಅದು ಜನರನ್ನು ಅಚ್ಚರಿಗೆ ತಳ್ಳುತ್ತದೆ’ ಎಂದು ದ್ರಾವಿಡ್‌ ಅರ್ಥಗರ್ಭಿತವಾಗಿ ಹೇಳಿದ್ದಾರೆ. “ನಾನ್ಯಾವತ್ತೂ ಬಹಳ ಭಾವುಕನಾಗುವುದಿಲ್ಲ. ಆದರೆ ಈ ಸಂದೇಶ ನನ್ನನ್ನು ಬಹಳ ಭಾವುಕನನ್ನಾಗಿಸಿದೆ. ಇದೊಂದು ಶ್ರೇಷ್ಠ ಸಂದೇಶ. ಇಡೀ ದೇಶವನ್ನು, ತಂಡವನ್ನು ಎಲ್ಲಕ್ಕಿಂತ ಮುಖ್ಯವಾಗಿ ನಾನು ಆರಾಧಿಸುವ ರಾಹುಲ್‌ ಭಾಯ್‌ರನ್ನು ಹೆಮ್ಮೆ ಪಡುವಂತೆ ಮಾಡುವ ಭರವಸೆಯಿದೆ’ ಎಂದು ಗಂಭೀರ್‌ ಪ್ರತಿಕ್ರಿಯಿಸಿದ್ದಾರೆ.

2021ರಿಂದ 2024ರ ಟಿ20 ವಿಶ್ವಕಪ್‌ ವರೆಗೆ ದ್ರಾವಿಡ್‌ ಭಾರತೀಯ ಕ್ರಿಕೆಟ್‌ ತಂಡಕ್ಕೆ ಮುಖ್ಯ ಕೋಚ್‌ ಆಗಿ ಮುನ್ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next