Advertisement

ಪಂಚಕುಲ ರಾಮ್‌ ರಹೀಮ್‌ ಹಿಂಸೆಗೆ ಕ್ರಿಕೆಟಿಗ ಗಂಭೀರ್‌ ಖಂಡನೆ

03:50 PM Aug 26, 2017 | Team Udayavani |

ಹೊಸದಿಲ್ಲಿ : ರೇಪ್‌ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸ್ವಯಂ ಘೋಷಿತ ದೇವಮಾನವ ಗುರುಮೀತ್‌ ರಾಮ್‌ ರಹೀಮ್‌ ಸಿಂಗ್‌ ಅವರ ಅಭಿಮಾನಿಗಳು ಮತ್ತು ಬೆಂಬಲಿಗರು ಹರಿಯಾಣದ ಪಂಚಕುಲ ಮತ್ತು ಪಂಜಾಬ್‌ ನಲ್ಲಿ ನಡೆಸಿರುವ ಹಿಂಸಾತ್ಮಕ ಪ್ರತಿಭಟನೆಗೆ 32 ಮಂದಿ ಬಲಿಯಾಗಿರುವುದಕ್ಕೆ ತೀವ್ರ ದುಃಖೀತರಾಗಿರುವ ಭಾರತೀಯ ಕ್ರಿಕೆಟಿಗ ಗೌತಮ್‌ ಗಂಭೀರ್‌ ಇಡಿಯ ಘಟನೆಯನ್ನು ಬಲವಾಗಿ ಖಂಡಿಸಿದ್ದಾರೆ. 

Advertisement

“ಮನುಷ್ಯ ಮತ್ತು ಆತನು ಎಸಗುವ ಪಾಪಕೃತ್ಯಗಳ ಬಗ್ಗೆ ರಾಮ್‌ ಮತ್ತು ರಹೀಮರು ಯಾವ ಅಭಿಪ್ರಾಯ ಹೊಂದಿದ್ದಾರೆ ಎಂಬುದನ್ನು ಕಂಡು ಅಚ್ಚರಿಯಾಗಿದೆ. ಧಾರ್ಮಿಕ ಮಾರ್ಕೆಟಿಂಗ್‌ ಗೆ ಇದೊಂದು ಪಕ್ಕಾ ಉದಾಹರಣೆ’ ಎಂದು ಗಂಭೀರ್‌ ಟ್ವೀಟ್‌ ಮಾಡಿದ್ದಾರೆ. 

ಗೌತಮ್‌ ಗಂಭೀರ್‌ ಈ ಹಿಂದೆಯೂ ರಾಷ್ಟ್ರ ಮಹತ್ವದ ಘಟನೆಗಳು ಹಾಗೂ ವಿದ್ಯಮಾನಗಳ ಬಗ್ಗೆ ತಮ್ಮ ನೇರ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮೂಲಕ ಎಲ್ಲರ ಗಮನ ಸೆಳೆದವರು. ಈ ಬಾರಿಯೂ ಅವರು ಸ್ವಯಂ ಘೋಷಿತ ದೇವಮಾನವ ಹಾಗೂ ಆತನ ಅಭಿಮಾನಿಗಳ ಕೃತ್ಯವನ್ನು ಟ್ವಿಟರ್‌ನಲ್ಲಿ ಖಂಡಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next