Advertisement

ಗೌರಿ ಹಂತಕರ ಬಂಧನ ಶೀಘ್ರ: ರಾಮಲಿಂಗಾರೆಡ್ಡಿ

11:42 AM Nov 12, 2017 | |

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಮಾಡಿದವರ ಸಂಪೂರ್ಣ ಮಾಹಿತಿ ಲಭ್ಯವಾಗಿದ್ದು, ಶೀಘ್ರವೇ ಹಂತಕರನ್ನು ಬಂಧಿಸಲಾಗುವುದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಪುನರುತ್ಛರಿಸಿದ್ದಾರೆ.

Advertisement

ಬೆಂಗಳೂರು ಪ್ರಸ್‌ ಕ್ಲಬ್‌ ಹಾಗೂ ವರದಿಗಾರರ ಕೂಟ ಏರ್ಪಡಿಸಿದ್ದ ಪತ್ರಿಕಾ ಸಂವಾದದಲ್ಲಿ ಪಾಲ್ಗೊಂಡು
ಮಾತನಾಡಿದರು. ಹತ್ಯೆ ಮಾಡಿದವರು ಎಡ ಪಂಥೀಯರೋ, ಬಲಪಂಥೀಯರೋ ಗೊತ್ತಿಲ್ಲ. ಶೂಟ್‌ ಮಾಡಿದವರು ಯಾರು ಅನ್ನೋದು ಪತ್ತೆಯಾಗಿದೆ.ಆದರೆ, ಸೂಕ್ತ ಸಾಕ್ಷ್ಯ ದೊರೆತ ಮೇಲೆ ಬಹಿರಂಗಪಡಿಸಲಾಗುವುದು ಎಂದು ತಿಳಿಸಿದರು.

ಸಂಶೋಧಕ ಎಂ.ಎಂ.ಕಲಬುರ್ಗಿ ಪ್ರಕರಣದಲ್ಲಿ ಇನ್ನೂ ಹಂತಕರು ಪತ್ತೆಯಾಗಿಲ್ಲ. ಆದರೆ, ಗೌರಿ ಪ್ರಕರಣದಲ್ಲಿ
ಹಂತಕರು ಯಾರು ಎನ್ನುವುದು ಸ್ಪಷ್ಟವಾಗಿದೆ.

ಸಾಕ್ಷ್ಯ ದೊರೆಯುವವರೆಗೂ ತನಿಖೆ ಮುಂದುವರಿಯಲಿದೆ ಎಂದರು. ಪ್ರಕರಣದಲ್ಲಿ ಅನುಮಾನಾಸ್ಪದ ವ್ಯಕ್ತಿಗಳನ್ನು
ನೋಡಿದವರು ನೀಡಿದ ಸಾಕ್ಷ್ಯಗಳ ಆಧಾರದಲ್ಲಿ ರೇಖಾ ಚಿತ್ರ ಬಿಡುಗಡೆ ಮಾಡಲಾಗಿದೆ. ಹಣೆಗೆ ಕುಂಕುಮ
ಇಟ್ಟವರ ರೇಖಾಚಿತ್ರ ಬಿಡುಗಡೆ ಮಾಡಲಾಗಿದೆ ಎಂದು ಬಿಜೆಪಿಯವರು ಇದರಲ್ಲಿ ರಾಜಕೀಯ ಮಾಡುವುದು
ಸರಿಯಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next