Advertisement

ಕರುಳಿನ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿ ಸಾವು

11:20 AM Feb 09, 2018 | |

ಬೈಂದೂರು: ಕರುಳಿನ ಕಾಯಿಲೆಯಿಂದ ಬಳಲುತ್ತಿದ್ದು ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಬೈಂದೂರಿನ ಅನುಷಾ ಗೌಡ (12) ಬುಧವಾರ ರಾತ್ರಿ ಸಾವನ್ನಪ್ಪಿದ್ದಾರೆ.

Advertisement

ಕಪ್ಪಾಡಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಅರೆಶಿರೂರಿನ ಸಂಜೀವ ಗೌಡ ಅವರ ಪುತ್ರಿಯಾಗಿದ್ದ ಈಕೆಯ ಲಿವರ್‌ ನಿಷ್ಕ್ರಿಯಗೊಂಡಿದ್ದ ಕಾರಣ   ಬದಲಿ ಲಿವರ್‌ ಜೋಡಣೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ  ಲಿವರ್‌ ಹೊಂದಾಣಿಕೆಯಾಗದ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ  ಮನೆಗೆ ಕರೆತರಲಾಗಿತ್ತು.  

ಝೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿಗೆ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ಈಕೆಯ ಚಿಕಿತ್ಸೆಗಾಗಿ ಅನೇಕ ಮಂದಿ ನೆರವು ನೀಡಿದ್ದರು. ಬಾಲಕಿಗೆ ಉಡುಪಿ, ಮಣಿಪಾಲ, ಇತರೆಡೆಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬದಲಿ ಲಿವರ್‌ ಜೋಡಣೆಗಾಗಿ ಡಿ. 21ರಂದು ಜಿಲ್ಲಾಡಳಿತದಿಂದ ಝೀರೋ ಟ್ರಾಫಿಕ್‌ ವ್ಯವಸ್ಥೆಯೊಂದಿಗೆ ಮಂಗಳೂರಿಗೆ ಕೊಂಡೊಯ್ದು ಅಲ್ಲಿಂದ ವಿಮಾನದ ಮೂಲಕ ಬೆಂಗಳೂರಿಗೆ ಕರೆದೊಯ್ಯಲಾಗಿತ್ತು. ಆಕೆ ತಂದೆ, ತಾಯಿ, ಸಹೋದರನನ್ನು ಅಗಲಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next