Advertisement

Thiruvananthapuram- Kasaragod;”ವಂದೇ ಭಾರತ್‌’ ರೈಲಿನಲ್ಲಿ ಅನಿಲ ಸೋರಿಕೆ

10:05 PM Feb 28, 2024 | Team Udayavani |

ಕಾಸರಗೋಡು: ತಿರುವನಂತಪುರದಿಂದ ಕಾಸರಗೋಡಿಗೆ ಬರುತ್ತಿದ್ದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಅನಿಲ ಸೋರಿಕೆ ಉಂಟಾಗಿದ್ದು, ಸಕಾಲಿಕ ಕಾರ್ಯಾಚರಣೆ ನಡೆಸಿ ಸಂಭಾವ್ಯ ಭಾರೀ ದುರಂತವನ್ನು ತಪ್ಪಿಸಲಾಯಿತು.

Advertisement

ಫೆ.28ರಂದು ಬೆಳಗ್ಗೆ 7 ಗಂಟೆಗೆ ತಿರುವನಂತಪುರದಿಂದ ಕಾಸರಗೋಡಿನತ್ತ ಪ್ರಯಾಣ ಆರಂಭಿಸಿದ್ದ ರೈಲು ಕಳಮಶೆÏàರಿ-ಆಲುವಾ ರೈಲು ನಿಲ್ದಾಣ ನಡುವೆ ತಲುಪಿದಾಗ ಅದರ ಸಿ-5 ಬೋಗಿಯಲ್ಲಿ ಹೊಗೆ ಕಾಣಿಸಿಕೊಂಡಿತು. ಪ್ರಯಾಣಿಕರು ಭಯಭೀತರಾಗಿದ್ದು, ಉಸಿರಾಡಲು ತೊಂದರೆಯಾಯಿತು.

ಹೊಗೆ ಕಾಣಿಸಿಕೊಂಡಿದ್ದರಿಂದ ರೈಲನ್ನು ಆಲುವಾದಲ್ಲಿ ನಿಲ್ಲಿಸಲಾಯಿತು. ಪ್ರಯಾಣಿಕರು ರೈಲಿನಿಂದ ಕೆಳಗಿಳಿದುದರಿಂದ ಅಪಾಯದಿಂತ ಪಾರಾದರು. ಅನಿಲ ಸೋರಿಕೆಯಿಂದ ಹೊಗೆ ಕಾಣಿಸಿಕೊಳ್ಳಲು ಕಾರಣವಾಯಿತೆಂದು ತನಿಖೆಯಿಂದ ತಿಳಿದು ಬಂತು. ಏರ್‌ ಕಂಡೀಷನ್‌ ಯಂತ್ರದಿಂದ ಅನಿಲ ಸೋರಿಕೆಯಾಗಿದೆ. ದುರಸ್ತಿಗೊಳಿಸಿದ ಬಳಿಕ ರೈಲು ಸಂಚಾರ ಮುಂದುವರಿಯಿತು.

Advertisement

Udayavani is now on Telegram. Click here to join our channel and stay updated with the latest news.

Next