Advertisement

ಚೆಂಬೂರ್‌ ನ ರಾಸಾಯನಿಕ ಗೊಬ್ಬರ ಘಟಕದಲ್ಲಿ ಅನಿಲ ಸೋರಿಕೆ: ಗಾಬರಿಗೊಂಡ ಜನತೆ

10:31 AM Sep 21, 2019 | Team Udayavani |

ಮುಂಬೈ: ಇಲ್ಲಿನ ಚೆಂಬೂರ್‌ ನ ರಾಷ್ಟ್ರೀಯ ರಾಸಾಯನಿಕ ಗೊಬ್ಬರ ಘಟಕದಲ್ಲಿ ಅನಿಲ ಸೋರಿಕೆಯಾಗಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.

Advertisement

ಪೂರ್ವ ಮುಂಬಯಿಯ ಕೆಲ ಪ್ರದೇಶದಲ್ಲಿ ಗುರುವಾರ ಸಂಜೆ ದುರ್ವಾಸನೆ ಅನುಭವವಾದಾಗ ಗಾಬರಿಗೊಂಡಿದ್ದ ಜನರು ಅಗ್ನಿ ಶಾಮಕ ದಳ ಸಿಬ್ಬಂದಿಗೆ ಮಾಹಿತಿ ತಿಳಿಸಿಲಾಗಿತ್ತು. ನಂತರ ಈ ದುರ್ವಾಸನೆ ಚೆಂಬೂರ್‌ ನ ರಾಸಾಯಮಿಕ ಗೊಬ್ಬರ ಘಟಕದಿಂದ ಬರುತ್ತಿರುವುದಾಗಿ ತಿಳಿದು ಬಂದಿದೆ.

ಘಟನೆಯಿಂದಾಗಿ ಯಾವುದೇ  ರೀತಿಯ ಅನಾರೋಗ್ಯದ ಬಗ್ಗೆ ವರದಿಯಾಗಿಲ್ಲ. ಸದ್ಯ ಘಟಕದಲ್ಲಿ ಸೋರಿಕೆಯನ್ನು ತಡೆದಿದ್ದು, ಸಹಜ ಸ್ಥಿತಿಗೆ ತರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next