Advertisement

ಗರದಲ್ಲಿ ಭರಪೂರ ಮನರಂಜನೆ : ನಿರೀಕ್ಷೆಯಲ್ಲಿ ಚಿತ್ರತಂಡ

09:11 AM Apr 27, 2019 | Team Udayavani |

‘ಗರ’ ಎಂಬ ಸಿನಿಮಾವೊಂದು ಸೆಟ್ಟೇರಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಮೇ 3ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಕೆ.ಆರ್‌. ಮುರಳಿ ಕೃಷ್ಣ ನಿರ್ದೇಶಿಸಿದ್ದಾರೆ. ಆರ್‌.ಕೆ.ನಾರಾಯಣ್‌ ಅವರ ಕಾದಂಬರಿ ಓದುತ್ತಿದ್ದ ಅವರಿಗೆ ಅನೇಕ ಪ್ರಶ್ನೆಗಳು ಕಾಡಿದವಂತೆ. ಆ ಪ್ರಶ್ನೆಗಳಿಗೆ ಉತ್ತರ ಹುಡುಕುವ ಸಂದರ್ಭದಲ್ಲಿ ಹುಟ್ಟಿದ್ದೇ “ಗರ’. ಈ ಚಿತ್ರ ಇವತ್ತಿನ ಕಾಲಘಟ್ಟಕ್ಕೆ ಹೆಚ್ಚು ಸೂಕ್ತವಾಗಿದೆ ಎನ್ನುವುದು ಅವರ ಮಾತು. “ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ.

Advertisement

ನಾವು ಅವಸರ ಮಾಡಿಕೊಂಡು ಬರುತ್ತಿಲ್ಲ. ತುಂಬಾ ಕೂಲ್‌ ಆಗಿ ರಿಲೀಸ್‌ ಮಾಡುತ್ತಿದ್ದೇವೆ. ಹೊಸತನದ ಸಿನಿಮಾಗಳನ್ನು ಕನ್ನಡ ಪ್ರೇಕ್ಷಕ ಸ್ವೀಕರಿಸುತ್ತಾನೆಂಬ ವಿಶ್ವಾಸವಿದೆ’ ಎಂದರು. ಚಿತ್ರದ ಬಿಡುಗಡೆಗೂ ಮೊದಲೇ ಪ್ರೇಕ್ಷಕರು ಮತ್ತು ಚಿತ್ರರಂಗದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮಲ್ಟಿಪ್ಲೆಕ್ಸ್‌ಗಳು ಕೂಡ ಚಿತ್ರ ಬಿಡುಗಡೆಗೆ ಉತ್ಸುಕವಾಗಿವೆ. ಒಂದು ಒಳ್ಳೆಯ ಚಿತ್ರ ಸರಿಯಾಗಿ ಪ್ರೇಕ್ಷಕರನ್ನು ತಲುಪಬೇಕು ಎನ್ನುವ ಕಾರಣಕ್ಕೆ, ಸಾಕಷ್ಟು ಯೋಜನೆ ಮಾಡಿಕೊಂಡು ಚಿತ್ರವನ್ನು ತೆರೆಗೆ ತರುತ್ತಿದ್ದೇವೆ. ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗುವುದೆಂಬ ನಂಬಿಕೆ ಇದೆ ಎನ್ನಲು ಮರೆಯುವುದಿಲ್ಲ.

ಇತ್ತೀಚೆಗೆ ಚಿತ್ರದ ಥೀಮ್‌ ಸಾಂಗ್‌ವೊಂದನ್ನು ಬಿಡುಗಡೆ ಮಾಡಲಾಯಿತು. ಚಿತ್ರದಲ್ಲಿ ನಟಿಸಿರುವ ರೆಹಮಾನ್‌ಗೂ ಇದೊಂದು ವಿಭಿನ್ನ ಬಗೆಯ ಚಿತ್ರವಾಗಿ ಪ್ರೇಕ್ಷಕರಿಗೆ ಇಷ್ಟವಾಗುವ ವಿಶ್ವಾಸವಿದೆ. ಉಳಿದಂತೆ ಚಿತ್ರದಲ್ಲಿ ಹಿರಿಯ ನಟರಾದ ಉಮೇಶ್‌, ಮನ್‌ದೀಪ್‌ರಾಯ್‌, ಆವಂತಿಕ, ಆರ್ಯನ್‌, ನೇಹಾ ಪಾಟೀಲ್‌, ಪ್ರಶಾಂತ್‌ ಸಿದ್ದಿ, ರಾಮಕೃಷ್ಣ, ರೂಪಾದೇವಿ, ತಬಲ ನಾಣಿ, ರೊಹೀತ್‌, ಸುನೇತ್ರ ಪಂಡಿತ್‌, ಸುಚಿತ್ರ, ನಿರಂಜನ್‌, ರಾಜೇಶ್‌ ರಾವ್‌, ಸೋನು, ದಯಾನಂದ್‌, ಗುರುರಾಜ್‌ ಮುಂತಾದವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಚಿತ್ರದ ವಿಶೇಷ ಜೋಡಿಯಾಗಿ ಬಾಲಿವುಡ್‌ನ‌ ಖ್ಯಾತ ನಟ ಜಾನಿ ಲೀವರ್‌ ಹಾಗೂ ಸಾಧುಕೋಕಿಲ ಅಭಿನಯಿಸಿದ್ದಾರೆ. ಚಿತ್ರದ ದೃಶ್ಯಗಳನ್ನು ಹೆಚ್‌.ಸಿ ವೇಣು ಛಾಯಾಗ್ರಹಣ, ಸಾಗರ್‌ ಸಂಗೀತ, ಉಮಾ ಶಂಕರ್‌ ಬಾಬು ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಉಳಿದಂತೆ ದಿನೇಶ್‌ ಕಲಾ ನಿರ್ದೇಶನ, ರವಿವರ್ಮ ಸಾಹಸ ನಿರ್ದೇಶನ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next