Advertisement

ಗಾಂಜಾ ಮಾರಾಟ: 8 ಮಂದಿ ವಿದ್ಯಾರ್ಥಿಗಳ ಬಂಧನ

05:07 AM Jan 14, 2019 | |

ಮಂಗಳೂರು: ನಗರದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಗಾಂಜಾ  ಸರಬರಾಜು ಮಾಡುತ್ತಿದ್ದ ಆರೋಪದಲ್ಲಿ ಕೇರಳ ಮೂಲದ 8 ಮಂದಿ ವಿದ್ಯಾರ್ಥಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಹಾಗೂ ಎಕೊನಾಮಿಕ್‌ ಆ್ಯಂಡ್‌ ನಾರ್ಕೋಟಿಕ್‌ ಕ್ರೆ„ಂ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಗಾಂಜಾ, ಎರಡು ದ್ವಿಚಕ್ರ ವಾಹನ ಸಹಿತ ಒಟ್ಟು  1,69,050 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Advertisement

ಮೂಲತಃ ಕೇರಳದ ಕೊಲ್ಲಂ ಜಿಲ್ಲೆಯ ಕರಿಪ್ರ ಗ್ರಾಮದ, ಪ್ರಸ್ತುತ ಮಂಗಳೂರಿನ ಕದ್ರಿಯಲ್ಲಿರುವ ಅಕ್ಷಯ್‌  ಕೆ. ಪ್ರಸಾದ್‌ (22), ಕೇರಳದ ಕಣ್ಣೂರು ಮೂಲದ ನಿವಾಸಿಗಳಾದ ನಿಮಿಲ್‌ (21), ಅಮಿತ್‌ ಶ್ರೀವತ್ಸನ್‌ (21), ಅಶ್ವಿ‌ನ್‌(21), ಮಹಮ್ಮದ್‌ ಆಮಿರ್‌ (22), ಆಕಾಶ್‌ ಎಸ್‌. ನಾಯರ್‌ (23), ಅಕ್ಷಯ್‌ (22) ಹಾಗೂ ಮಂಗಳೂರು ನಗರದ ಹೊರವಲಯ ಕಣ್ಣೂರು ಬೋರುಗುಡ್ಡೆ ನಿವಾಸಿ ಜಾಫ‌ರ್‌ (22) ಬಂಧಿತರು. ನಗರದ ಮೋರ್ಗನ್ಸ್‌ಗೆàಟ್‌ ಬಳಿಯ ಮೈದಾನಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿ ಆಧಾರದಲ್ಲಿ ಪೊಲೀಸರು ದಾಳಿ ನಡೆಸಿದ್ದರು.

ಬಂಧಿತರಿಂದ 12,000 ರೂ. ಮೌಲ್ಯದ 500 ಗ್ರಾಂ ಗಾಂಜಾ, 8 ಮೊಬೈಲ್‌ ಫೋನ್‌ಗಳು, 4,050 ರೂ.  ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.  ಸಿಸಿಬಿ ಇನ್ಸ್‌ಪೆಕ್ಟರ್‌ ಶಾಂತಾರಾಮ, ಎಕೊನಾಮಿಕ್‌ ಆ್ಯಂಡ್‌ ನಾರ್ಕೋಟಿಕ್‌ ಕ್ರೆ„ಂ ಠಾಣೆಯ ಇನ್‌ಸ್ಪೆಕ್ಟರ್‌ ರಾಮಕೃಷ್ಣ  ಕೆ.ಕೆ. ಮತ್ತು ಸಿಸಿಬಿ ಪಿಎಸ್‌ಐ  ಕಬ್ಟಾಳ್‌ರಾಜ್‌ ಎಚ್‌.ಡಿ. ಹಾಗೂ ಸಿಬಂದಿ  ಕಾರ್ಯಾಚರಣೆಯಲ್ಲಿ  ಭಾಗವಹಿಸಿದ್ದರು.

ಎಂಜಿನಿಯರಿಂಗ್‌, ಫಿಸಿಯೋಥೆರಪಿ ವಿದ್ಯಾರ್ಥಿಗಳು
ಬಂಧಿತರು ಕೇರಳದಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಆರೋಪಿಗಳ ಪೈಕಿ 7 ಮಂದಿ ಮಂಗಳೂರಿನ ಎರಡು ಎಂಜಿನಿಯರಿಂಗ್‌ ಕಾಲೇಜಿನ ಹಾಗೂ ಒಂದು ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿಗಳಾಗಿರುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next