Advertisement

ದಾವಣಗೆರೆಯಲ್ಲಿ ಗ್ಯಾಂಗ್‌ವಾರ್‌;ಬುಳ್ಳನಾಗ &ಟೀಮ್‌ನ ಹತ್ಯೆ ಯತ್ನ

11:28 AM Dec 09, 2017 | |

ದಾವಣಗೆರೆ: ಹರಿಹರದ ಕುಮಾರಪಟ್ಟಣಂ ಸೇತುವೆ ಬಳಿ  ಶುಕ್ರವಾರ ರಾತ್ರಿ ಗ್ಯಾಂಗ್‌ವಾರ್‌ ನಡೆದಿದ್ದು, 15 ಕ್ಕೂ ಹೆಚ್ಚು ಜನ ದುಷ್ಕರ್ಮಿಗಳ ತಂಡ ಬುಳ್ಳನಾಗ ಮತ್ತು ತಂಡದ ಮೇಲೆ ಮಾರಕಾಯುಧಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದಾರೆ. 

Advertisement

ಸುಪಾರಿ ಪಡೆದಿದ್ದ ತಂಡ ಬುಳ್ಳನಾಗ ಮತ್ತು ತಂಡ ಪ್ರಯಾಣಿಸುತ್ತಿದ್ದ ಕಾರನ್ನು ಅಡ್ಡಗಟ್ಟಿ ಮಾರಕಾಯುಧಗಳಿಂದ ದಾಳಿ ನಡೆಸಿದ್ದು, ಕಾರನ್ನು ಶರವೇಗದಲ್ಲಿ ಚಲಾಯಿಸಿದ್ದರಿಂದ ಕಾರಿನಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಬುಳ್ಳನಾಗ ಮತ್ತು ಇಬ್ಬರು ಸಹಚರರು ಗಂಭೀರವಾಗಿ  ಗಾಯಗೊಂಡಿದ್ದಾರೆ. ಕಾರಿನ ಗಾಜುಗಳು ಜಖಂಗೊಂಡಿವೆ. ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಕುಣಮ ಅಲಿಯಾಸ್‌ ಸಂತೋಷ್‌ ನನ್ನ ಹತ್ಯೆಗೆ ಸುಪಾರಿ ನೀಡಿದ್ದಾನೆ ಎಂದು ಬುಳ್ಳನಾಗ ಆರೋಪಿಸಿದ್ದಾನೆ.  

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. 

Advertisement

2 ತಿಂಗಳ ಹಿಂದೆ ದಾವಣಗೆರೆ ಪೊಲೀಸರು 7 ಮಂದಿ ಸುಪಾರಿ ಹಂತಕರನ್ನು ವಶಕ್ಕೆ ಪಡೆದಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next