Advertisement

ದರೋಡೆಕೋರರಿಂದ ಪೊಲೀಸರ ಮೇಲೆ ದಾಳಿ;ಇಬ್ಬರ ಕಾಲಿಗೆ ಗುಂಡು

09:56 AM Oct 08, 2017 | |

ಕಲಬುರಗಿ: ನಗರದ ಡಬರಾ‌ಬಾದ್‌ ಬಳಿ ಬಂಧಿಸಲು ಮುಂದಾದ  ಪೊಲೀಸರ ಮೇಲೆಯೇ ದರೋಡೆಕೋರರು ಮಾರಕಾಯುಧಗಳಿಂದ ದಾಳಿ ನಡೆಸಿದ್ದು, ಪ್ರತಿದಾಳಿಯಲ್ಲಿ ಇಬ್ಬರ ಕಾಲಿಗೆ ಗುಂಡು ಹಾರಿಸಲಾಗಿದೆ. 

Advertisement

ದರೋಡೆಕೋರರನ್ನು ವಶಕ್ಕೆ ಪಡೆಯಲು  ಎಸ್‌ಐ ಅಕ್ಕಮಹಾದೇವಿ, ಮತ್ತು ಸಿಬಂದಿಗಳು ಕಾರ್ಯಾಚರಣೆಗಿಳಿದಿದ್ದು, ಈ ವೇಳೆ ಮಾರಕಾಯುಧಗಳಿಂದ ದಾಳಿ ನಡೆಸಿದ್ದಾರೆ. ಕೂಡಲೇ ಆತ್ಮರಕ್ಷಣೆಗಾಗಿ ಪೊಲೀಸರು ಇಬ್ಬರ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. 

ಶಿವಕುಮಾರ್‌ ಮತ್ತು ಚೇತನ್‌ ಎಂಬ ದುಷ್ಕರ್ಮಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಗಾಯಗೊಂಡಿರುವ ಎಸ್‌ಐ ಆಕ್ಕಮಹಾದೇವಿ ಮತ್ತು ಪೇದೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಕಲಬುರಗಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next