Advertisement

ಹೆಬ್ರಿ ಮೂಲದ ಭೂಗತ ಪಾತಕಿ ಸುರೇಶ್‌ ಪೂಜಾರಿ ಗಡಿಪಾರು

12:56 AM Dec 16, 2021 | Team Udayavani |

ಮಂಗಳೂರು: ಹಲವಾರು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಭೂಗತ ಪಾತಕಿ ಸುರೇಶ್‌ ಪೂಜಾರಿಯನ್ನು ಫಿಲಿಫೈನ್ಸ್‌ ನಿಂದ ಭಾರತಕ್ಕೆ ಗಡಿಪಾರು ಮಾಡಲಾಗಿದೆ.

Advertisement

ಥಾಣೆ, ಕಲ್ಯಾಣ, ಉಲ್ಲಾ ಸನಗರ, ಡೊಂಬಿವಿಲಿ ಮೊದಲಾದೆಡೆಗಳಲ್ಲಿ ನಡೆದ ಸುಲಿಗೆ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಈತನನ್ನು ಮಂಗಳವಾರ ರಾತ್ರಿ ಹೊಸದಿಲ್ಲಿಗೆ ಕರೆತರಲಾಗಿದೆ.

ವಿಮಾನ ನಿಲ್ದಾಣದಲ್ಲಿ ಬೇಹುಗಾರಿಕೆ ದಳ ಹಾಗೂ ಸಿಬಿಐ ಅಧಿಕಾರಿಗಳು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಬಳಿಕ ಆತನನ್ನು ಕಸ್ಟಡಿಗೆ ತೆಗೆದು ಕೊಳ್ಳಲು ಮುಂಬಯಿ ಅಪರಾಧ ವಿಭಾಗದ ತಂಡ ಈಗಾಗಲೇ ದಿಲ್ಲಿಗೆ ತೆರಳಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ರೆಡ್‌ ಕಾರ್ನರ್‌ ನೋಟಿಸ್‌
ಮುಂಬಯಿ ಹಾಗೂ ಥಾಣೆ ಪೊಲೀಸರು 2017, 2018ರಲಿ ಸುರೇಶ್‌ ಪೂಜಾರಿ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ಜಾರಿಗೊಳಿಸಿದ್ದರು. ಸುಮಾರು 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈತನನ್ನು ಅಕ್ಟೋಬರ್‌ನಲ್ಲಿ ಫಿಲಿಫೈನ್ಸ್‌ನಲ್ಲಿ ಬಂಧಿಸಲಾಗಿತ್ತು. ಈತ ಮೂಲತಃ ಕಾರ್ಕಳ ತಾಲೂಕಿನ ಹೆಬ್ರಿಯವನಾಗಿದ್ದಾನೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ:2022ರೊಳಗೆ 11 ಲಕ್ಷ ಮನೆ ನಿರ್ಮಾಣ ಪೂರ್ಣ: ಸಚಿವ ವಿ.ಸೋಮಣ್ಣ

Advertisement

ರವಿ ಪೂಜಾರಿಯ ಬಂಟ
ಸುರೇಶ್‌ ಪೂಜಾರಿ ಗ್ಯಾಂಗ್‌ಸ್ಟರ್‌ ರವಿ ಪೂಜಾರಿ ಜತೆ ನಿಕಟ ಸಂಪರ್ಕದಲ್ಲಿದ್ದ ವ್ಯಕ್ತಿ. ಈತನ ವಿರುದ್ಧ ಮುಂಬ ಯಿಯಲ್ಲಿ 15, ಥಾಣೆಯಲ್ಲಿ 7 ಸೇರಿ ಮಹಾರಾಷ್ಟ್ರಾದ್ಯಂತ ಒಟ್ಟು 24 ಸುಲಿಗೆ ಪ್ರಕರಣ ಗಳಿವೆ. ಎನ್‌ಸಿಪಿ ನಾಯಕರ ಮೇಲೆ ಹಲ್ಲೆ, ವಕೀಲ ಮಜೀದ್‌ ಮೆಮನ್‌ ಮೇಲೆ ಹಲ್ಲೆ ಸೇರಿ ಅನೇಕ ಪ್ರಕರಣಗಳು ಕೂಡ ದಾಖಲಾಗಿವೆ. ಕರ್ನಾ ಟಕದಲ್ಲೂ ಈತನ ವಿರುದ್ಧ ಅನೇಕ ವಂಚನೆ ಪ್ರಕರಣಗಳು ಬಾಕಿಯಿವೆ.

Advertisement

Udayavani is now on Telegram. Click here to join our channel and stay updated with the latest news.

Next