Advertisement

Gangolli ಜೇನುನೊಣ ದಾಳಿ; ವ್ಯಕ್ತಿ ಗಂಭೀರ

10:19 PM Jun 18, 2024 | Team Udayavani |

ಗಂಗೊಳ್ಳಿ: ಜೇನುನೊಣಗಳು ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಗಂಗೊಳ್ಳಿಯಲ್ಲಿ ನಡೆದಿದೆ.

Advertisement

ಗಂಗೊಳ್ಳಿ ಗ್ರಾಮದ ವಾಟರ್‌ ಟ್ಯಾಂಕ್‌ ಬಳಿ ಜೇನುನೊಣಗಳು ಏಕಾಏಕಿ ಮುಖ್ಯ ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ದಾಳಿ ನಡೆಸಿದ ಪರಿಣಾಮ ಇಮ್ತಿಯಾಜ್ ಗಂಭೀರವಾಗಿ ಗಾಯಗೊಂಡಿದ್ದು, ಗಂಗೊಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಜೇನುನೊಣಗಳ ಸುಮಾರು 20ಕ್ಕೂ ಮಿಕ್ಕಿ ಮುಳ್ಳುಗಳನ್ನು ಇಮ್ತಿಯಾಜ್ ದೇಹದಿಂದ ಹೊರ ತೆಗೆಯಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೇ ವೇಳೆ ನಾಲ್ಕೈದು ಜನರ ಮೇಲೂ ಜೇನುನೊಣ ದಾಳಿ ನಡೆಸಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ.

ಗಂಗೊಳ್ಳಿ ಗ್ರಾಮ ಪಂಚಾಯತ್‌ನ ನೀರು ಸರಬರಾಜು ಮಾಡುವ ವಾಟರ್‌ ಟ್ಯಾಂಕ್‌ ಮೇಲೆ ದೊಡ್ಡ ಜೇನು ಗೂಡಿದ್ದು, ಗಾಳಿಗೆ ಅಲುಗಾಡಿಯೋ ಅಥವಾ ಇನ್ನಾವುದೋ ಪಕ್ಷಿಗಳು ಹಾರಾವಾಗ ಜೇನು ಗೂಡು ಅಲುಗಾಡಿದ ಪರಿಣಾಮ ಜೇನುನೊಣಗಳು ಒಮ್ಮೆಲೆ ಗೂಡಿನಿಂದ ಹೊರಬಂದು ಸಿಕ್ಕಸಿಕ್ಕವರಿಗೆ ಕಚ್ಚಲು ಪ್ರಾರಂಭಿಸಿದೆ ಎನ್ನಲಾಗಿದ್ದು, ಕೂಡಲೇ ಎಚ್ಚೆತ್ತುಕೊಂಡ ಸ್ಥಳೀಯರು ಅಗತ್ಯ ಮುಂಜಾಗ್ರತ ಕ್ರಮಕೈಗೊಂಡು ಸಾರ್ವಜನಿಕರು ಈ ಮಾರ್ಗವಾಗಿ ಸಂಚರಿಸದಂತೆ ತಡೆದರು. ಕೆಲ ಸಮಯದ ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಜೇನುನೊಣ ದಾಳಿಯಿಂದ ಗಾಯಗೊಂಡ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next