Advertisement

ಗಂಗಾವತಿ: ಅಲ್ಪಾವಧಿಯಲ್ಲಿ 3.42 ಕೋಟಿ ರೂ.ರಾಜಸ್ವ ಸಂಗ್ರಹ

07:33 PM Jan 31, 2024 | Team Udayavani |

ಗಂಗಾವತಿ: ಅಲ್ಪಾವಧಿಯಲ್ಲಿ ಸರಕಾರದ ಸೂಚನೆಯಂತೆ 3.42 ಕೋಟಿ ರೂ.ಗಳ ರಾಜಸ್ವ ಸಂಗ್ರಹಿಸಲಾಗಿದ್ದು ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ತಡೆಗೆ ಕ್ರಮ ಕೈಗೊಂಡು 501 ಬಾರಿ ದಾಳಿ ನಡೆಸಿ ಅಕ್ರಮ ತಡೆದು ಕೇಸ್ ದಾಖಲಿಸಲಾಗಿದೆ ಎಂದು ಅಬಕಾರಿ ವಲಯ ನಿರೀಕ್ಷಕ ವಿಠಲ್ ಪಿರಗಣ್ಣವರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

ವಲಯ ವ್ಯಾಪ್ತಿಯಲ್ಲಿ ಒಟ್ಟು 62 ಸನ್ನದು (ಮದ್ಯದ ಅಂಗಡಿಗಳು) ಇರುತ್ತವೆ. ಮೇಲಿಂದ ಮೇಲೆ ಸನ್ನದುಗಳ ತಪಾಸಣೆ ಮಾಡುತ್ತಾ ಸನ್ನದು ಷರತ್ತುಗಳ ಉಲ್ಲಂಘಿಸಿದವರ ವಿರುದ್ಧ ಕೇಸ್ ಹಾಕಲಾಗಿದೆ. 14 ಘೋರ ಪ್ರಕರಣಗಳು 22 ಬಿಎಲ್‌ಸಿ ಪ್ರಕರಣ, 176 ದಾಳಿಗಳನ್ನು ಮಾಡಿ 532 ಲೀ ಅಕ್ರಮ ಮದ್ಯ ಜಪ್ತಿ ಮಾಡಿ 09 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

50 ಘೋರ ಪ್ರಕರಣಗಳನ್ನು ದಾಖಲಿಸಿದ್ದು, 492, 15(ಎ) ಪ್ರಕರಣಗಳನ್ನು ದಾಖಲಿಸಿದ್ದು, ಸನ್ನದು (ಮದ್ಯ ಅಂಗಡಿ) ಮೇಲೆ 110 ಬಿಎಲ್‌ಸಿ ಪ್ರಕರಣಗಳನ್ನು ದಾಖಲಿಸಿದ್ದು, 01 ಎನ್.ಡಿ.ಪಿ.ಎಸ್ (ಗಾಂಜಾ) ಪ್ರಕರಣ ದಾಖಲಿಸಿ 501 ದಾಳಿಗಳನ್ನು ಮಾಡಲಾಗಿದೆ. 2260.24 ಲೀ ಅಕ್ರಮ ಮದ್ಯ ಜಪ್ತಿ ಮಾಡಲಾಗಿದೆ. 109.78 ಲೀ ಬಿಯರ್ ಜತೆ 27 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಅಬಕಾರಿ ಅಕ್ರಮ ಚಟುವಟಿಕೆಗಳು ನಡೆಯದಂತೆ ಮತ್ತು ಸನ್ನದುಗಳ ಮೇಲೆ ನಿಗಾವಹಿಸಿ ಸನ್ನದು ಷರತ್ತುಗಳ ಉಲ್ಲಂಘನೆಯಾಗದಂತೆ ಸನ್ನದುದಾರರಿಗೆ ಎಚ್ಚರಿಕೆಯನ್ನು ನೀಡಿ ಸರ್ಕಾರದ ರಾಜ್ಯಸ್ವದ ಹಿತದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ಮೇಲಾಧಿಕಾರಿಗಳ ಆದೇಶದಂತೆ ಅಕ್ರಮ ಮದ್ಯ ಮಾರಾಟ ತಡೆಯಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದ್ದು, ಅಕ್ರಮ ಮದ್ಯ ಮಾರಾಟದ ಕುರಿತು ಸಾರ್ವಜನಿಕರು ಇಲಾಖೆಗೆ ಮಾಹಿತಿ ನೀಡುವಂತೆ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next