Advertisement

ಗಂಗಾವತಿ: NRC, CAA ವಿರೋಧಿಸಿ ನಗರದ ಹಲವೆಡೆ ಗೋಡೆ ಬರಹ

09:31 AM Jan 15, 2020 | Mithun PG |

ಗಂಗಾವತಿ: ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಹಾಗು ಎನ್ ಆರ್ ಸಿ ಕಾಯ್ದೆ ವಿರೋಧಿಸಿ ನಗರದ ಜೂನಿಯರ್ ಕಾಲೇಜಿನ ಮೈದಾನದ ಗೋಡೆಗಳಿಗೆ ‘ನೋ ಎನ್ ಆರ್ ಸಿ,ಸಿಎಎ, ಎನ್ ಪಿಆರ್ ‘  ಎಂಬ ಬರಹ ಬರೆಯುವ ಮೂಲಕ ವಿರೋಧ ವ್ಯಕ್ತಪಡಿಸಲಾಗಿದೆ.

Advertisement

ಈಗಾಗಲೇ ನಗರದ ಕಿಲ್ಲಾ ಏರಿಯಾದಲ್ಲಿ ಪೌರತ್ವ ಕಾಯ್ದೆ ಜಾಗೃತಿ ಮಾಡಲು ತೆರಳಿದ್ದ ಬಿಜೆಪಿ ಮುಖಂಡರ ವಿರುದ್ದ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.

ಪೌರತ್ವ ಕಾಯ್ದೆ ದುಷ್ಪರಿಣಾಮಗಳ ಕುರಿತು ಪ್ರತಿ ವಾರ್ಡಿನಲ್ಲಿ ಜಾಗೃತಿ ಮೂಡಿಸಲು ಅಲ್ಪಸಂಖ್ಯಾತರು ಕಾಂಗ್ರೆಸ್, ಹಿಂದುಳಿದ ದಲಿತ ಮುಖಂಡರು ಸಭೆ ನಡೆಸಿದ್ದಾರೆ. ಈ ಮಧ್ಯೆ ಪಿಎಲ್ ಡಿ ಬ್ಯಾಂಕ್ ಬಿಇಒ ಆಫೀಸ್ ಕಚೇರಿ ಗೋಡೆಗಳ ಮೇಲೆ ‘ನೋ ಎನ್ ಆರ್ ಸಿ ,ಸಿಎಎ ಎನ್ ಪಿ ಆರ್’ ಎಂದು ಬರೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next