ಗಂಗಾವತಿ: ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಹಾಗು ಎನ್ ಆರ್ ಸಿ ಕಾಯ್ದೆ ವಿರೋಧಿಸಿ ನಗರದ ಜೂನಿಯರ್ ಕಾಲೇಜಿನ ಮೈದಾನದ ಗೋಡೆಗಳಿಗೆ ‘ನೋ ಎನ್ ಆರ್ ಸಿ,ಸಿಎಎ, ಎನ್ ಪಿಆರ್ ‘ ಎಂಬ ಬರಹ ಬರೆಯುವ ಮೂಲಕ ವಿರೋಧ ವ್ಯಕ್ತಪಡಿಸಲಾಗಿದೆ.
ಈಗಾಗಲೇ ನಗರದ ಕಿಲ್ಲಾ ಏರಿಯಾದಲ್ಲಿ ಪೌರತ್ವ ಕಾಯ್ದೆ ಜಾಗೃತಿ ಮಾಡಲು ತೆರಳಿದ್ದ ಬಿಜೆಪಿ ಮುಖಂಡರ ವಿರುದ್ದ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.
ಪೌರತ್ವ ಕಾಯ್ದೆ ದುಷ್ಪರಿಣಾಮಗಳ ಕುರಿತು ಪ್ರತಿ ವಾರ್ಡಿನಲ್ಲಿ ಜಾಗೃತಿ ಮೂಡಿಸಲು ಅಲ್ಪಸಂಖ್ಯಾತರು ಕಾಂಗ್ರೆಸ್, ಹಿಂದುಳಿದ ದಲಿತ ಮುಖಂಡರು ಸಭೆ ನಡೆಸಿದ್ದಾರೆ. ಈ ಮಧ್ಯೆ ಪಿಎಲ್ ಡಿ ಬ್ಯಾಂಕ್ ಬಿಇಒ ಆಫೀಸ್ ಕಚೇರಿ ಗೋಡೆಗಳ ಮೇಲೆ ‘ನೋ ಎನ್ ಆರ್ ಸಿ ,ಸಿಎಎ ಎನ್ ಪಿ ಆರ್’ ಎಂದು ಬರೆಯಲಾಗಿದೆ.