Advertisement

ಗಂಗಾವತಿ ಆಸ್ಪತ್ರೆಗೆ ಮತ್ತೆ ಪ್ರಶಸ್ತಿ

01:20 PM Oct 13, 2019 | Suhan S |

ಗಂಗಾವತಿ: ನಗರದ ಸರಕಾರಿ ಉಪವಿಭಾಗ ಆಸ್ಪತ್ರೆಗೆ ಮತ್ತೂಮ್ಮೆ 2018-19ನೇ ಸಾಲಿನ ಕೇಂದ್ರ ಸರ್ಕಾರದ ಕಾಯಕಲ್ಪ ಪ್ರಶಸ್ತಿ ಪಡೆದುಕೊಂಡಿದ್ದು, ಪ್ರಶಸ್ತಿಯೊಂದಿಗೆ 15 ಲಕ್ಷ ರೂ. ನಗದು ಮೊತ್ತದ ಪುರಸ್ಕಾರ ಪಡೆಯಿತು. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಸೇವೆಗಳ ಇಲಾಖೆ ಕೇಂದ್ರ ಸಚಿವ ಹರ್ಷವರ್ಧನ ಅವರಿಂದ ಇಲ್ಲಿನ ಉಪವಿಭಾಗ ಆಸ್ಪತ್ರೆಯ ವೈದ್ಯಾಧಿಕಾರಿ ಈಶ್ವರ ಸವಡಿ ಅವರಿಗೆ ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿಯು ಫಲಕ, ಸ್ಮರಣಿಕೆ ಸೇರಿ ಒಟ್ಟು 15 ಲಕ್ಷ ಮೊತ್ತದ ನಗದು ಹಣ ಹೊಂದಿದೆ. ಈ ಪೈಕಿ ಶೇ. 75ರಷ್ಟು ಆಸ್ಪತ್ರೆಯ ಗುಣಮಟ್ಟ ಸುಧಾರಣೆ ಮತ್ತು ಶೇ. 25ರಷ್ಟು ಸಿಬ್ಬಂದಿಗೆ ಪ್ರೋತ್ಸಾಹ ರೂಪದಲ್ಲಿ ನಗದು ಹಣ ನೀಡಲು ಅವಕಾಶವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next