Advertisement

Gangavathi: ದುಷ್ಕರ್ಮಿಗಳಿಂದ ಕಾರು, ಬೈಕ್ ಮತ್ತು ಕರೆಂಟ್ ಮೀಟರ್ ದ್ವಂಸ

12:17 PM Jul 29, 2023 | Team Udayavani |

ಗಂಗಾವತಿ: ದುಷ್ಕರ್ಮಿಗಳು ಕಾರು, ಬೈಕ್, ಕರೆಂಟ್ ಮೀಟರ್ ಹಾಗೂ ಮನೆ ಗೇಟನ್ನು ದ್ವಂಸ ಮಾಡಿದ ಘಟನೆ ನಗರದ 27 ನೇ ವಾರ್ಡ್ ಕನ್ನಿಕಾಪರಮೇಶ್ವರಿ ದೇವಾಲಯದ ಎದುರುಗಡೆ ಮತ್ತು ಕಲ್ಮಠ ಸುತ್ತಲಿನ‌ ಏರಿಯಾದಲ್ಲಿ ಜು.28ರ ಶುಕ್ರವಾರ ಮಧ್ಯರಾತ್ರಿ ನಡೆದಿದೆ. ಘಟನೆಯಲ್ಲಿ 8 ಬೈಕ್, 4 ಕಾರಿನ ಗ್ಲಾಸ್ ಸೇರಿ ಮನೆಯ ಗೇಟ್ ಹಾಗೂ ಕರೆಂಟ್ ಮೀಟರ್ ಗಳನ್ನು  ಜಖಂಗೊಳಿಸಲಾಗಿದೆ.

Advertisement

ಮೊಹರಂ ಕತ್ತಲ ರಾತ್ರಿಯಾಗಿದ್ದರಿಂದ ಬೀಟ್ ಪೊಲೀಸರ ಡ್ಯೂಟಿಯನ್ನು ಮಸೀದಿ ಪ್ರದೇಶಗಳಿಗೆ ಹಾಕಿದ್ದರಿಂದ ಕಿಡಿಗೇಡಿಗಳು ಕೃತ್ಯವೆಸಗಿದ್ದು, ಕೂಡಲೇ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಂಡು ವಾರ್ಡ್ ನಲ್ಲಿ ನಿತ್ಯವೂ ಬೀಟ್ ಪೊಲೀಸರನ್ನು ನಿಯೋಜಿಸುವಂತೆ ಸ್ಥಳೀಯರು ನಗರ ಪೊಲೀಸ್ ಠಾಣೆಗೆ ದೂರು ನೀಡಿ ಮನವಿ ಮಾಡಿದ್ದಾರೆ.

ಸ್ಥ‌ಳಕ್ಕೆ 112 ಪೊಲೀಸ್ ವಿಭಾಗದ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next