Advertisement

ಪ್ರಸಾದ ವಿಷವಾಗಲು ಹಳೇ ತುಪ್ಪ, ಕೊಬ್ಬರಿ ಬಳಕೆಯೇ ಕಾರಣ?

04:48 AM Jan 27, 2019 | Team Udayavani |

ಚಿಕ್ಕಬಳ್ಳಾಪುರ: ಇಲ್ಲಿನ ಚಿಂತಾಮಣಿ ನಗರದ ನಾರಸಿಂಹಪೇಟೆಯ ಗಂಗಮ್ಮ ದೇವಾಲಯದಲ್ಲಿ ಪ್ರಸಾದ ಸೇವಿಸಿ ಇಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಪ್ರಸಾದ ತಯಾರಿಯಲ್ಲಿ ಹಳೇ ತುಪ್ಪ ಮತ್ತು ಹಳೇ ಕೊಬ್ಬರಿಯನ್ನು ಬಳಸಿದ್ದೇ ಕಾರಣ ಎಂದು ಪ್ರಾಥಮಿಕ ತನಿಖೆಯ ವೇಳೆ ಬಂಧಿತ ಆರೋಪಿಗಳಿಬ್ಬರು ತಿಳಿಸಿರುವ ಮಾಹಿತಿ ಲಭ್ಯವಾಗಿದೆ.

Advertisement

ಪ್ರಸಾದ ಸೇವಿಸಿ ಕವಿತಾ ಮತ್ತು ಸರಸ್ವತಿ ಸಾವಿಗೀಡಾಗಿದ್ದರೆ, 5 ಜನ ಈಗಾಗಲೇ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಲಕ್ಷ್ಮೀ ಹಾಗೂ ಅಮರಾವತಿ ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆಯ ವೇಳೆ ಈ ರೀತಿಯಾಗಿ ಪ್ರಸಾದ ತಯಾರಿಯಲ್ಲಿ ಹಳೇ ತುಪ್ಪ ಮತ್ತು ಕೊಬ್ಬರಿ ಬಳಕೆಯ ವಿಷಯ ಹೊರಬಿದ್ದಿರುವುದಾಗಿ ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next