Advertisement

ಗಂಗಮಾಂಬ ದೇವಿ ಬ್ರಹ್ಮ ರಥೋತ್ಸವ

04:12 PM Feb 02, 2020 | Team Udayavani |

ಶ್ರೀನಿವಾಸಪುರ: ಬಿರುಬಿಸಿಲಿನ ನಡುವೆಯೂ ತಾಲೂಕಿನ ಕೂಳಗುರ್ಕಿ ಪ್ರಸಿದ್ಧ ಗಂಗಮಾಂಬ ದೇವಿ ಬ್ರಹ್ಮ ರಥೋತ್ಸವ ನಡೆಯಿತು.

Advertisement

ತಾಲೂಕಿನ ಸೋಮಯಾಜಲಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೂಳಗುರ್ಕಿ ಗ್ರಾಮದ ಹೊರವಲಯದಲ್ಲಿ ನೆಲೆಸಿರುವ ದೇವಿ ಬ್ರಹ್ಮ ರಥೋತ್ಸವದಲ್ಲಿ ನೆರೆ ಆಂಧ್ರ ಸೇರಿದಂತೆ ತಾಲೂಕಿನ ಸೋಮಯಾಜಲಹಳ್ಳಿ, ಅಡವಿ ಚಂಬಕೂರು, ಗುಂತವಾರಿಪಲ್ಲಿ, ಪುರ್ನಪಲ್ಲಿ, ಬ್ರಾಹ್ಮಣರಪಲ್ಲಿ, ಕೋಟಬಲ್ಲಪಲ್ಲಿ, ಜೊನ್ನಪಲ್ಲಿ, ನೆರ್ನಹಳ್ಳಿ, ಓಜಲಹಳ್ಳಿ,

ಕೊರೆಹಳ್ಳಿ, ಮಲೆಪಲ್ಲಿ ಸೇರಿದಂತೆ 30ಕ್ಕೂ ಹೆಚ್ಚು ಗ್ರಾಮಗಳ ಜನರು ಪಾಲ್ಗೊಂಡಿದ್ದರು. ಜಾತ್ರೆಗೆ ಆಗಮಿಸಿದ್ದ ಭಕ್ತರಿಗೆ ಪಾನಕ, ಕೋಸಂಬರಿ ಸಹ ಭಕ್ತರಿಗೆ ಹಂಚಲಾಯಿತು. ರಥೋತ್ಸವಕ್ಕೆ ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ, ಮಾಜಿ ಶಾಸಕ ಜಿ.ಕೆ.ವೆಂಕಟ ಶಿವಾರೆಡ್ಡಿ, ಜಿಲ್ಲಾ ಪಂಚಾಯ್ತಿ ಸದಸ್ಯ ತೂಪಲ್ಲಿ ಆರ್‌. ನಾರಾಯಣಸ್ವಾಮಿ, ತಹಶೀಲ್ದಾರ್‌ ಸುಜಾತಾ ವಿಶೇಷ ಪೂಜೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next