Advertisement
ನ. 18ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಂದು ಮಧ್ಯಾಹ್ನ ಪ್ರೇಮಿಗಳು ತಣ್ಣೀರುಬಾವಿ ಸಮೀಪದ ತೋಟ ಬೆಂಗ್ರೆ ಬೀಚಿಗೆ ಹೋಗಿದ್ದರು. ಅದು ನಿರ್ಜನ ಪ್ರದೇಶವಾಗಿತ್ತು. ಅಲ್ಲಿದ್ದ ಅಪರಿಚಿತ ಯುವಕರ ತಂಡ ಈ ಪ್ರೇಮಿಗಳನ್ನು ಬೆದರಿಸಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.ಈ ವಿಷಯವನ್ನು ನ. 26ರಂದು ಪ್ರೇಮಿಗಳು ಬಂಟ್ವಾಳದಲ್ಲಿ ಪೊಲೀಸರಿಗೆ ತಿಳಿಸಿದ್ದರು. ಅವರು ಪಣಂಬೂರು ಪೊಲೀಸರಿಗೆ ಅಥವಾ ಮಂಗಳೂರು ಪೊಲೀಸರಿಗೆ ದೂರು ಕೊಡುವಂತೆ ಸಲಹೆ ನೀಡಿದ್ದರು. ಆದರೆ ಯುವತಿ ಮಂಗಳೂರಿಗೆ ತೆರಳಿ ದೂರು ನೀಡಲು ಮುಂದಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಪೊಲೀಸರು ಸ್ವಯಂಪ್ರೇರಿತರಾಗಿ ದೂರು ದಾಖಲಿಸಲು ಮುಂದಾಗಿದ್ದಾರೆ ಎಂದು ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್ ತಿಳಿಸಿದ್ದಾರೆ. ಒಟ್ಟು 7 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸಮಗ್ರ ತನಿಖೆಯ ಬಳಿಕವಷ್ಟೆ ಸಂಪೂರ್ಣ ವಿಷಯ ಬೆಳಕಿಗೆ ಬರಲಿದೆ.