Advertisement

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

12:36 AM May 01, 2024 | Team Udayavani |

ಉಪ್ಪಿನಂಗಡಿ: ಕೈ ತುಂಬಾ ಸಂಪಾದನೆಯ ಖಾಸಗಿ ವೈದ್ಯಕೀಯ ವೃತ್ತಿಯನ್ನು ಕೈಬಿಟ್ಟು ಭಾರತೀಯ ಸೇನೆಯಲ್ಲಿ ವೈದ್ಯನಾಗಿ ದುಡಿಯಬೇಕೆಂಬ ಹಂಬಲವನ್ನು ಹೊಂದಿದ್ದ ಉಪ್ಪಿನಂಗಡಿಯ ಯುವ ವೈದ್ಯ ಡಾ| ಗೌತಮ್‌ ರೈ ಭಾರತೀಯ ಸೇನೆಯ ಇಂಡೋ ಟಿಬೇಟಿಯನ್‌ ಬಾರ್ಡರ್‌ ಪೊಲೀಸ್‌ (ಐಟಿಬಿಪಿ) ವಿಭಾಗದಲ್ಲಿ ವೈದ್ಯಾಧಿಕಾರಿ ಸಹಿತ ಅಸಿಸ್ಟಂಟ್‌ ಕಮಾಂಡೆಂಟ್‌ ಆಗಿ ಸೇರ್ಪಡೆಗೊಂಡಿದ್ದಾರೆ.

Advertisement

ಉಪ್ಪಿನಂಗಡಿಯ ಶರತ್‌ ಕುಮಾರ್‌ ರೈ – ರುಕ್ಮಿಣಿ ರೈ ದಂಪತಿಯ ಪುತ್ರನಾಗಿರುವ ಗೌತಮ್‌ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ 10ನೇ ತರಗತಿ ವರೆಗೆ ವಿದ್ಯಾಭ್ಯಾಸ ಮಾಡಿದ್ದು, ಅದೇ ವೇಳೆ ಸ್ಕೌಟ್‌ನಲ್ಲಿ ರಾಷ್ಟ್ರಪತಿ ಪುರಸ್ಕಾರ್‌ ಪರೀಕ್ಷೆ ಉತ್ತೀರ್ಣರಾಗಿದ್ದರು. ಪಿಯುಸಿಯನ್ನು ಪುತ್ತೂರಿನ ಅಂಬಿಕಾ ವಿದ್ಯಾಲಯದಲ್ಲಿ ಪಡೆದು ವೈದ್ಯಕೀಯ ಶಿಕ್ಷಣವನ್ನು ಹೊಸಕೋಟೆಯ ಎಂಬಿಜೆ ಮೆಡಿಕಲ್‌ ಕಾಲೇಜಿನಲ್ಲಿ ಪಡೆದಿರುತ್ತಾರೆ.

ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂಬ ಜೀವಮಾನದ ಕನಸನ್ನು ನನಸಾಗಿಸಲು ತನ್ನ ವೈದ್ಯಕೀಯ ವೃತ್ತಿಯನ್ನು ಸೇನೆಯಲ್ಲಿ ಮುಂದುವರಿಸಲು ಹಂಬಲಿಸಿದರು. ಸಲ್ಲಿಸಿದ ಅರ್ಜಿ ಪುರಸ್ಕೃತಗೊಂಡು 6 ತಿಂಗಳ ಸೈನಿಕ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಪಾಸಿಂಗ್‌ ಔಟ್‌ ಪೆರೇಡ್‌ನ‌ಲ್ಲಿ ಹೆತ್ತವರಿಂದ ಪದಕವನ್ನು ಪೋಣಿಸಿಕೊಂಡರು.

 

Advertisement

Udayavani is now on Telegram. Click here to join our channel and stay updated with the latest news.

Next