Advertisement

ಗಣೇಶೋತ್ಸವ: ದ.ಕ. ಜಿಲ್ಲೆಗೆ ಹೆಚ್ಚುವರಿ ನಿರ್ಬಂಧಗಳಿಲ್ಲ : ರಾಜ್ಯ ಸರಕಾರದ ಆದೇಶವೇ ಅನ್ವಯ

12:40 AM Sep 08, 2021 | Team Udayavani |

ಮಂಗಳೂರು: ಸಾರ್ವಜನಿಕ ಗಣೇಶೋತ್ಸವಕ್ಕೆ ರಾಜ್ಯ ಸರಕಾರ ಷರತ್ತುಬದ್ಧ ಅನುಮತಿ ನೀಡಿದ್ದು, ದಕ್ಷಿಣ ಕನ್ನಡ ಜಿಲ್ಲೆಗೂ ಅದೇ ಅನ್ವಯ ವಾಗುತ್ತದೆ. ಯಾವುದೇ ಹೆಚ್ಚುವರಿ ನಿರ್ಬಂಧ ಗಳಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

Advertisement

ರಾಜ್ಯ ಸರಕಾರ ರವಿವಾರ ಹೊರಡಿಸಿರುವ ಆದೇಶದಂತೆ ಒಮ್ಮೆಗೆ 20 ಮಂದಿಗಿಂತ ಹೆಚ್ಚು ಜನರು ಸೇರಬಾರದು, ಆಯೋಜಕರು ಕೊರೊನಾ ನೆಗೆಟಿವ್‌ ವರದಿ, ಲಸಿಕೆ ಪಡೆದಿರುವ ಪ್ರಮಾಣಪತ್ರ ಹೊಂದಿರಬೇಕು. ಸರಳ ರೀತಿಯಲ್ಲಿ ಮನೆ, ದೇವಸ್ಥಾನ, ಸಾರ್ವಜನಿಕ ಸ್ಥಳಗಳಲ್ಲಿ ಕನಿಷ್ಠ ಜನರೊಂದಿಗೆ ಚೌತಿ ಆಚರಿಸಬಹುದು. ಸಾರ್ವಜನಿಕ ಸ್ಥಳಗಳಲ್ಲಿ ಗರಿಷ್ಠ 5 ದಿನಗಳವರೆಗೆ ಮಾತ್ರ ಆಚರಿಸಲು ಅನುಮತಿ

ಸಹಿತ ಹಲವು ಷರತ್ತು ಗಳೊಂದಿಗೆ ಗಣೇಶ ಹಬ್ಬ ಆಚರಿಸಲು ಸರಕಾರ ಅನುಮತಿ ನೀಡಿದೆ. ದ.ಕ. ಜಿಲ್ಲೆಗೂ ಇದೇ ಆದೇಶ ಅನ್ವಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next