Advertisement

ಅಖಿಲ ಗಾಂವ್ದೇವಿ ಕನ್ನಡ ಮಿತ್ರ ಮಂಡಳಿ: ಗಣೇಶೋತ್ಸವ,ಯಕ್ಷಗಾನ 

02:51 PM Aug 22, 2017 | Team Udayavani |

ಮುಂಬಯಿ: ಅಖೀಲ ಗಾಂವ್ದೇವಿ ಕನ್ನಡ ಮಿತ್ರ ಮಂಡಳಿಯ 87ನೇ ವಾರ್ಷಿಕ ಗಣೇಶೋತ್ಸವವು ಅ. 25ರಂದು ಗ್ರಾಟ್‌ರೋಡ್‌ ಪಶ್ಚಿಮದ ನಾನಾಚೌಕ್‌ ಸಮೀಪದಲ್ಲಿರುವ ಗಾಂವ್ದೇವಿಯ  ಜೆ. ಕೆ. ಬಿಲ್ಡಿಂಗ್‌ ಆವರಣದಲ್ಲಿ ಜರಗಲಿದೆ.

Advertisement

ಅಂದು ಬೆಳಗ್ಗೆ ಭವ್ಯ ಮೆರವಣೆಗೆಯಲ್ಲಿ  ಶ್ರೀ ವಿಘ್ನೇಶ್ವರನ ಆಗಮನವಾಗಲಿದ್ದು,  ತದ ನಂತರ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿದೆ. ಸಂಜೆ 7 ರಿಂದ  ಗ್ರಾಮದೇವಿಯ ಸನ್ನಿಧಾನದಲ್ಲಿ ಪೂಜೆ ನಡೆಯಲಿದ್ದು, ಬಳಿಕ ಸರ್ವಾಲಂಕೃತನಾದ ವಿಘ್ನೇಶ್ವರನಿಗೆ 23 ಆರತಿಗಳೊಂದಿಗೆ ಅಲಂಕಾರ ಪೂಜೆ ನೆರವೇರಲಿದೆ. ಯಕ್ಷ ಪ್ರಿಯ ಬಳಗ ಮತ್ತು ಯಕ್ಷ ಕಲಾ ತರಂಗದವರ ಹಿಮ್ಮೇಳದೊಂದಿಗೆ ಕನ್ನಡ ಮಿತ್ರ ಮಂಡಳಿಯ ಅಧ್ಯಕ್ಷರಾದ ಮಹಾದೇವ ಪೂಜಾರಿ ಅವರ ನೇತೃತ್ವದಲ್ಲಿ  ವೇದಮೂರ್ತಿ ಎಂ. ಜೆ. ಪ್ರವೀಣ್‌ ಭಟ್‌ ಪೂಜಾ ಕೈಂಕರ್ಯಗಳನ್ನು ನಿರ್ವಹಿಸಲಿದ್ದು, ಆ ಬಳಿಕ ನೆರೆದ ಭಕ್ತಾದಿಗಳಿಗೆ ತೀರ್ಥ-ಪ್ರಸಾದ ವಿತರಿಸಲಾಗುವುದು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ  ಅಂದು ರಾತ್ರಿ 10.30ಕ್ಕೆ ಸರಿಯಾಗಿ ಯಕ್ಷ ಪ್ರಿಯ ಬಳಗ ಮತ್ತು ಯಕ್ಷ ಕಲಾತರಂಗ ಹಾಗೂ  ಊರಿನ   ಸುಪ್ರಸಿದ್ಧ  ಅತಿಥಿ  ಕಲಾವಿದರ  ಕೂಡುವಿಕೆಯಿಂದ  ಸುದರ್ಶನ ವಿಜಯ ಮತ್ತು ಸುಧನ್ವ ಮೋಕ್ಷ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಆ ಪ್ರಯುಕ್ತ ಭಕ್ತಾದಿಗಳು ಹಾಗೂ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತೀರ್ಥ-ಪ್ರಸಾದ  ಸ್ವೀಕರಿಸಿ ಶ್ರಿ ವಿN°àಶ್ವರನ ಕೃಪೆಗೆ ಪಾತ್ರರಾಗುವಂತೆ ಅಖೀಲ ಗಾಂವೆªàವಿ ಕನ್ನಡ ಮಿತ್ರ ಮಂಡಳಿಯ ಅಧ್ಯಕ್ಷರಾದ  ಮಹಾದೇವ ಪೂಜಾರಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next