Advertisement

ಹಿಂದೂ ಮಹಾಗಣಪತಿಗೆ ಭಕ್ತಿಪೂರ್ವಕ ವಿದಾಯ

03:09 PM Sep 19, 2021 | Team Udayavani |

ನಾಯಕನಹಟ್ಟಿ: ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ಶನಿವಾರ ಪಟ್ಟಣದಲ್ಲಿ ಶ್ರದ್ಧಾ ಭಕ್ತಿಯಿಂದನೆರವೇರಿತು. ಒಂಭತ್ತು ದಿನಗಳ ಕಾಲ ಪಾದಗಟ್ಟೆ ಬಳಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು.

Advertisement

ತೇರು ಬೀದಿ,ಒಳಮಠ, ಅಂಬೇಡ್ಕರ್‌ ಕಾಲೋನಿ ಮೂಲಕ ಮೆರವಣಿಗೆ ಸಾಗಿತು. ಚಿಕ್ಕ ಕೆರೆಯ ಬಳಿ ನಿರ್ಮಿಸಲಾದಹೊಂಡದಲ್ಲಿ ಗಣಪತಿಯನ್ನು ವಿಸರ್ಜಿಸಲಾಯಿತು. ಮೆರವಣಿಗೆ ಪ್ರಯುಕ್ತ ಪ್ರಮುಖ ಬೀದಿಗಳನ್ನು ಕೇಸರಿಬಣ್ಣದ ಬಾವುಟಗಳ ಹಾಗೂ ಬಂಟಿಂಗ್ಸ್‌ಗಳಿಂದ ಅಲಂಕರಿಸಲಾಗಿತ್ತು. ವಾಲ್ಮೀಕಿ ಸರ್ಕಲ್‌ನಲ್ಲಿ ನಾನಾಹೂವುಗಳು ಹಾಗೂ ಟೊಮ್ಯಾಟೋ ಬಳಸಿ ಓಂ ಚಿತ್ರವನ್ನು ಬಿಡಿಸಲಾಗಿತ್ತು.

ನಾನಾ ರೀತಿಯ ರಂಗೋಲಿಗಳುಗಮನ ಸೆಳೆದವು. ಸ್ವಾತಂತ್ರÂ ಹೋರಾಟಗಾರರ ಬೃಹತ್‌ ಭಾವಚಿತ್ರಗಳನ್ನು ಪ್ರದರ್ಶಿಸಲಾಯಿತು. ಟ್ರಾಷ್‌ವಾದ್ಯಗಳ ಸದ್ದಿಗೆ ಯುವಕರು ಹೆಜ್ಜೆ ಹಾಕಿದರು. ಕೋವಿಡ್‌ ಮಾರ್ಗಸೂಚಿ ಹಿನ್ನೆಲೆಯಲ್ಲಿ ಡಿಜೆಗೆಅವಕಾಶ ನೀಡಿರಲಿಲ್ಲ. ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಪಿಎಸ್‌ಐ ಮಹೇಶ್‌ ಲಕ್ಷ್ಮಣ ಹೊಸಪೇಟೆನೇತೃತ್ವದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಹಿಂದೂ ಮಹಾಗಣಪತಿ ಸಮಿತಿಯ ಎನ್‌.ಮಹಾಂತಣ್ಣ, ತ್ರಿಶೂಲ್‌, ಉಮೇಶ್‌, ರಾಜು, ವೇಣು, ವಿಷ್ಣು, ಜಿತೇಂದ್ರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next