Advertisement

Ganesh Procession: ಮಂಗಳೂರು ಗಣೇಶೋತ್ಸವ ಸಂಪನ್ನ

02:15 AM Sep 14, 2024 | Team Udayavani |

ಮಂಗಳೂರು: ಹಿಂದೂ ಯುವ ಸೇನಾ ಆಶ್ರಯದಲ್ಲಿ ಮಂಗಳೂರಿನ ನೆಹರೂ ಮೈದಾನದಲ್ಲಿ ಒಂದು ವಾರ ಕಾಲ ಆಯೋಜನೆಗೊಂಡ 32ನೇ ವರ್ಷದ “ಮಂಗಳೂರು ಗಣೇಶೋತ್ಸವ’ ಶುಕ್ರವಾರ ಸಂಪನ್ನಗೊಂಡಿತು.

Advertisement

ಸಂಜೆ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ನಡೆದು ಬಳಿಕ ಶಿವಾಜಿ ಮಂಟಪದಿಂದ ಶ್ರೀ ವಿನಾಯಕನ ದೇವರ ವಿಗ್ರಹದ ವೈಭವದ ಶೋಭಾಯಾತ್ರೆ ಆರಂಭಗೊಂಡಿತು. ಶೋಭಾಯಾತ್ರೆಯಲ್ಲಿ ಹಿಂದೂ ಯುವ ಸೇನೆಯ ವಿವಿಧ ಶಾಖೆಗಳ ದೃಶ್ಯರೂಪಕ, ಸ್ತಬ್ಧಚಿತ್ರಗಳು ಭಾಗವಹಿಸಿದ್ದವು.

ಮೈದಾನದಿಂದ ಹೊರಟು ಕ್ಲಾಕ್‌ ಟವರ್‌, ಹಂಪನ ಕಟ್ಟೆ ಸಿಗ್ನಲ್‌ ವೃತ್ತ, ಕೆ.ಎಸ್‌. ರಾವ್‌ ರಸ್ತೆ, ನವಭಾರತ್‌ ವೃತ್ತ, ಡೊಂಗರ ಕೇರಿ ಯಾಗಿ ರಥಬೀದಿ ವೆಂಕಟ ರಮಣ ದೇವ ಸ್ಥಾನದ ಮಹಮ್ಮಾಯಿ ಕೆರೆಯಲ್ಲಿ ಜಲಸ್ತಂಭನ ಗೊಂಡಿತು. ಶೋಭಾಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತ ಜನರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next