Advertisement

ಮತ್ತೆ ಒಂದಾದ ಗಣೇಶ್ – ಪ್ರೀತಂ ಗುಬ್ಬಿ; ಯುಗಾದಿಯಂದು ಹೊಸ ಚಿತ್ರದ ಟೈಟಲ್ ರಿಲೀಸ್

11:03 AM Mar 31, 2022 | Team Udayavani |

ನವ ಸಂವತ್ಸರ ಯುಗಾದಿಯಂದು ಗೋಲ್ಡನ್ ಸ್ಟಾರ್ ಗಣೇಶ್ ಅವರ ಹೊಸ ಚಿತ್ರದ ಟೈಟಲ್ ಬಿಡುಗಡೆಯಾಗಲಿದೆ. ಈ ಹಿಂದೆ ಹಲವು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಪ್ರೀತಂ ಗುಬ್ಬಿ ಮತ್ತು ಗಣೇಶ್ ಮತ್ತೆ ಒಂದಾಗುತ್ತಿದ್ದಾರೆ.

Advertisement

ಈ ಹಿಂದೆ ಗಣೇಶ್ ಗೆ ‘ಮಳೆಯಲಿ ಜೊತೆಯಲಿ’, ‘ದಿಲ್ ರಂಗೀಲಾ’ ಮತ್ತು ‘99’ ಚಿತ್ರಗಳನ್ನು ನಿರ್ದೇಶಿಸಿದ್ದ ಪ್ರೀತಿಂ ಗುಬ್ಬಿ ಇದೀಗ ಹೊಸ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಹೊಸ ಚಿತ್ರವನ್ನು ‘ಶ್ರೀವಾರಿ ಟಾಕೀಸ್’ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿದೆ.

ಯುಗಾದಿಯ ದಿನದಂದು ( ಎಪ್ರಿಲ್ 2) ಬೆಳಗ್ಗೆ 8.45ಕ್ಕೆ ಹೊಸ ಚಿತ್ರದ ಟೈಟಲ್ ಬಿಡುಗಡೆಯಾಗಲಿದೆ ಎಂದು ಗಣೇಶ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:ದಿನೇಶ್ ಕಾರ್ತಿಕ್ ರನ್ನು ಧೋನಿಗೆ ಹೋಲಿಸಿದ ಆರ್ ಸಿಬಿ ನಾಯಕ ಫಾಫ್

“ನವ ಸಂವತ್ಸರ ಯುಗಾದಿಯಂದು ಹೊಸ ಚಿತ್ರದ ಟೈಟಲ್ ಲಾಂಚ್. ನಾನು , ಪ್ರೀತಂ ಗುಬ್ಬಿ ಮುಂಗಾರು ಮಳೆಯಿಂದ ಸಿನಿ ಪಯಣದಲ್ಲಿ ಜೊತೆಯಾದವರು. ನಮ್ಮ ಜೋಡಿಯ ಮಳೆಯಲಿ ಜೊತೆಯಲಿ, ದಿಲ್ ರಂಗೀಲಾ, 99 ಚಿತ್ರಗಳನ್ನು ನೋಡಿ ಹರಸಿದ್ದೀರಿ. ಈಗ ಶ್ರೀವಾರಿ ಟೀಕೀಸ್ ನೊಂದಿಗೆ ಮತ್ತೊಂದು ಹೊಸ ಕನಸಿನ ಪಯಣದ ಪ್ರಾರಂಭ. ಹರೆಯದ ಹೃದಯಗಳೇ, ಹರಸಿ” ಎಂದು ಗಣೇಶ್ ಟ್ವೀಟ್ ಮಾಡಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next