Advertisement
ಗುರುಗಳಾಗಿ ಇದನ್ನು ನಡೆಸಿಕೊಟ್ಟವರು ಚೆನ್ನೈಯ ಡಾ. ಮುಲ್ಲೆ„ ವಾಸಲ್ ಚಂದ್ರಮೌಳಿ. ಮೊದಲ ದಿನ ಸಂಜೆ ಬರೋಡಾದ ಎಸ್. ಕೆ. ಮಹತಿಯವರ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಏರ್ಪಡಿಸಲಾಗಿತ್ತು. ತೋಡಿಯ ಏರನಾಪೈ ವರ್ಣವನ್ನು ಗಟ್ಟಿ ತಳಹದಿಯೊಂದಿಗೆ ಹಾಡುವುದರ ಮೂಲಕ ಕಛೇರಿ ಪ್ರಾರಂಭಗೊಂಡಿತು. ನಂತರ ಮೋಹನ ಕಲ್ಯಾಣಿಯಲ್ಲಿ ಸಿದ್ಧಿವಿನಾಯಕಂ, ಕನಕದಾಸರ “ಬಾಗಿಲನು ತೆರೆದು’ (ಅಠಾಣ) , “ನಮ್ಮಮ್ಮ ಶಾರದೆ’ (ವಸಂತ) ಒಳ್ಳೆಯ ಮನೋಧರ್ಮದೊಂದಿಗೆ ಮೂಡಿಬಂದವು. ಶುದ್ಧ ಸೀಮಂತಿನಿಯಲ್ಲಿ ಹಾಡಿದ “ಜಾನಕೀ ರಮಣ’ ರಾಗ, ಭಾವ ಸು#ರಿತ ಆಲಾಪನೆಯೊಂದಿಗೆ, “ರಕ್ತನಳಿನ’ದಲ್ಲಿ ತ್ವರಿತ ಗತಿಯ ಸ್ವರ ಕಲ್ಪನೆಗಳೊಂದಿಗೆ ಮನ ಸೆಳೆದವು. ಮುಖ್ಯ ರಾಗವಾಗಿ ಭೈರವಿಯನ್ನು ಆರಿಸಿಕೊಂಡ ಗಾಯಕಿ ಏನಾಟಿನೋಮು ಕೃತಿಯ ಹಾಡುವಿಕೆಯಲ್ಲಿ ಹಾಗೂ “ಸುಂದರೇಶ’ದಲ್ಲಿ ಮಾಡಿದ ಕರಾರುವಾಕ್ಕಾದ ನೆರೆವಲ್ , ಸ್ವರಪ್ರಸ್ತಾರಗಳಲ್ಲಿ ತನ್ನ ಅಪರಿಮಿತ ವಿದ್ವತ್ ಹಾಗೂ ಹಿಡಿತವನ್ನು ಪ್ರದರ್ಶಿಸಿದರು. ಇಲ್ಲಿ ಡಾ| ಬಾಲಚಂದ್ರ ಆಚಾರ್ಯ ಮೃದಂಗ ವಾದನದಲ್ಲಿ ಚಿಕ್ಕದಾದ ಆದರೂ ವಿದ್ವತೂ³ರ್ಣವಾದ ತನಿ ಆವರ್ತನವನ್ನು ನುಡಿಸಿ ಮುದ ನೀಡಿದರು. ಅನಂತರ ಹೇ ಗೋವಿಂದ ಹೇ ಗೋಪಾಲ, ರಾಮಮಂತ್ರವ ಜಪಿಸೋ ( ಜಾನ್ಪುರಿ) ರಾಮನೇ ಭಜಿತ್ತಾರೈ ತಮಿಳು ರಚನೆ(ಮಾಂಡ್) ಚಂದ್ರಚೂಡಶಿವ ಶಂಕರ ಪಾರ್ವತಿ (ದರ್ಬಾರಿ), ರಂಗ ಬಾರೋ ಪಾಂಡುರಂಗ ಬಾರೋ (ಸಿಂಧು ಭೈರವಿ), ವೃಂದಾವನಿಯಲ್ಲಿ ತಿಲ್ಲಾನ, ಮಧ್ಯಮಾವತಿಯಲ್ಲಿ ಪಾಹಿರಾಮಪ್ರಭೋ ಮುಂತಾದ ಲಘು ಪ್ರಸ್ತುತಿಗಳೊಂದಿಗೆ ಈ ಹಾಡುಗಾರಿಕೆಯು ಮುಕ್ತಾಯಗೊಂಡಿತು.ಪಕ್ಕವಾದ್ಯದಲ್ಲಿ ವೇಣುಗೋಪಾಲ್ ಶ್ಯಾನುಭೋಗ್ ವಯೊಲಿನ್, ಹಾಗೂ ಡಾ|ಬಾಲಚಂದ್ರ ಆಚಾರ್ಯ ಮೃದಂಗದಲ್ಲಿ ಸಹಕಾರವನ್ನಿತ್ತರು. ಎರಡನೆಯ ದಿನವೂ ಶಿಬಿರ ಮುಂದುವರಿಯಿತು.