Advertisement

Game-Changer; ಕಳೆದ 5 ವರ್ಷಗಳಲ್ಲಿ ಭಾರತದಲ್ಲಿ ಅನೇಕ ಸುಧಾರಣೆ: ಪ್ರಧಾನಿ ಮೋದಿ

06:27 PM Feb 10, 2024 | Team Udayavani |

ಹೊಸದಿಲ್ಲಿ: ಕಳೆದ ಐದು ವರ್ಷಗಳ ಬಿಜೆಪಿ ನೇತೃತ್ವದ ಸರಕಾರದಿಂದ ದೇಶದಲ್ಲಿ ಸುಧಾರಣೆ, ಕಾರ್ಯಕ್ಷಮತೆ ಮತ್ತು ಅಪರೂಪದ ಪರಿವರ್ತನೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.

Advertisement

17 ನೇ ಲೋಕಸಭೆಯ ಕೊನೆಯ ಅಧಿವೇಶನದ ಕೊನೆಯ ದಿನದಂದು ಸದನವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸದಸ್ಯರನ್ನು ಅಭಿನಂದಿಸಿ ಸದನವನ್ನು ನಡೆಸುವಲ್ಲಿ ಸ್ಪೀಕರ್ ಓಂ ಬಿರ್ಲಾ ಅವರ ಪಾತ್ರವನ್ನು ಶ್ಲಾಘಿಸಿದರು.

ಐದು ವರ್ಷಗಳು ದೇಶದಲ್ಲಿ ಸುಧಾರಣೆ, ಸಾಧನೆ ಮತ್ತು ಪರಿವರ್ತನೆಗೆ ಸಂಬಂಧಿಸಿದ್ದವು. ಸುಧಾರಣೆ ಮತ್ತು ಕಾರ್ಯನಿರ್ವಹಣೆಯೆರಡೂ ನಡೆಯುವುದು ಬಹಳ ಅಪರೂಪ ಮತ್ತು ನಾವು ನಮ್ಮ ಕಣ್ಣ ಮುಂದೆಯೇ ಪರಿವರ್ತನೆಯನ್ನು ಕಾಣಬಹುದಾಗಿದೆ.ದೇಶವು 17 ನೇ ಲೋಕಸಭೆಯ ಮೂಲಕ ಇದನ್ನು ಅನುಭವಿಸುತ್ತಿದೆ, ದೇಶವು ಆಶೀರ್ವಾದವನ್ನು ಮುಂದುವರೆಸುತ್ತದೆ ಎಂದು ನಾನು ದೃಢವಾಗಿ ನಂಬುತ್ತೇನೆ ಎಂದರು.

17ನೇ ಲೋಕಸಭೆಯ ಮೊದಲ ಅಧಿವೇಶನದಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ 30 ಮಸೂದೆಗಳನ್ನು ಅಂಗೀಕರಿಸಲಾಯಿತು. ಇದು ಸಾರ್ವಕಾಲಿಕ ದಾಖಲೆಯಾಗಿತ್ತು. 17 ನೇ ಲೋಕಸಭೆಯು 97 ಪ್ರತಿಶತ ಉತ್ಪಾದಕತೆಯನ್ನು ಹೊಂದಿತ್ತು ಮತ್ತು ಏಳು ಅವಧಿಗಳಲ್ಲಿ ಶೇಕಡಾ 100 ಕ್ಕಿಂತ ಹೆಚ್ಚು ಇತ್ತು ಎಂದರು.

ಕಳೆದ ಐದು ವರ್ಷಗಳಲ್ಲಿ, ಮಾನವೀಯತೆಯು ಶತಮಾನದ ಅತ್ಯಂತ ದೊಡ್ಡ ಸವಾಲನ್ನು ಎದುರಿಸಿತ್ತು, ಸದನಕ್ಕೆ ಬರುವುದೂ ಒಂದು ಸವಾಲಾಗಿತ್ತು ಎಂದರು.

Advertisement

ಸ್ಪೀಕರ್ ಸರ್, ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ನೀವು ಖಚಿತಪಡಿಸಿದ್ದೀರಿ. ದೇಶದ ಕೆಲಸ ಎಂದಿಗೂ ನಿಲ್ಲುವುದಿಲ್ಲ. ಸವಾಲಿನ ಸಮಯದಲ್ಲಿ, ನಿಮ್ಮ ಸಂಬಳದ 30% ಅನ್ನು ದೇಶಕ್ಕೆ ಸಹಾಯ ಮಾಡಲು ನೀವು ನೀಡಿದ್ದಕ್ಕಾಗಿ ನಾನು ಸದಸ್ಯರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದರು.

ನಮಗೆ ಹೊಸ ಸಂಸತ್ ಕಟ್ಟಡ ಬೇಕು ಎಂದು ಎಲ್ಲರೂ ಹೇಳಿದರು. ಎಲ್ಲರೂ ಅದನ್ನು ಬಯಸಿದ್ದರು ಆದರೆ ಅದರ ಬಗ್ಗೆ ನಿರ್ಧಾರವಾಗಲಿಲ್ಲ. ನಾವು ಅದನ್ನು ನಿರ್ಧರಿಸಿದೇವು. ನಾವು ಇಂದು ಹೊಸ ಸಂಸತ್ತಿನಲ್ಲಿ ಕುಳಿತಿದ್ದೇವೆ ಎಂದರು.

ಭಾರತಕ್ಕೆ ಜಿ20 ಅಧ್ಯಕ್ಷ ಸ್ಥಾನ ಸಿಕ್ಕಿತು. ಪ್ರತಿಯೊಂದು ರಾಜ್ಯಗಳೂ ದೇಶದ ಶಕ್ತಿ ಮತ್ತು ರಾಜ್ಯದ ಅಸ್ಮಿತೆಯನ್ನು ಜಗತ್ತಿನ ಮುಂದೆ ಪ್ರದರ್ಶಿಸಿದವು ಎಂದರು.

ಅನೇಕ ತಲೆಮಾರುಗಳು ಒಂದೇ ಸಂವಿಧಾನದ ಕನಸು ಕಂಡಿದ್ದರು ಆದರೆ ಈ ಸದನವು 370 ನೇ ವಿಧಿಯನ್ನು ರದ್ದುಗೊಳಿಸಿತು.ಕಾಶ್ಮೀರದ ಜನರು ಸಾಮಾಜಿಕ ನ್ಯಾಯದಿಂದ ದೂರವಿದ್ದರು. ಇಂದು ನಾವು ಅದನ್ನು ಅವರ ಬಳಿಗೆ ತೆಗೆದುಕೊಂಡೆವು. ಭಯೋತ್ಪಾದನೆ ವಿರುದ್ಧ ಹೋರಾಡಲು ನಾವು ಕಠಿಣ ಕಾನೂನು ರೂಪಿಸಿದ್ದೇವೆ ಎಂದರು.

ತ್ರಿವಳಿ ತಲಾಖ್ ಕುರಿತು ಮಾತನಾಡಿ”ನ್ಯಾಯಾಲಯವು ಮುಸ್ಲಿಂ ಮಹಿಳೆಯರ ಪರವಾಗಿ ಆದೇಶ ನೀಡಿದ್ದರೂ ಅದರ ಲಾಭವನ್ನು ಅನುಭವಿಸಲು ಸಾಧ್ಯವಾಗಲಿಲ್ಲ. ಈ ಲೋಕಸಭೆಯು ತಲೆಮಾರುಗಳ ಅನ್ಯಾಯವನ್ನು ಕೊನೆಗೊಳಿಸಲು ಸಹಾಯ ಮಾಡಿತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next