Advertisement

ಯುವಪ್ರತಿಭೆಗಳ ಗೆಜ್ಜೆ ಪೂಜೆ

12:04 PM Jul 07, 2018 | Team Udayavani |

ಸಂಗೀತ ಭಾರತಿ  ಇನ್ಸ್‌ಟ್ಯೂಟ್‌ ಆಫ್ ಆರ್ಟ್ಸ್ ಶಾಲೆಯ ಯುವಪ್ರತಿಭೆಗಳ ಗೆಜ್ಜೆಪೂಜೆ ಕಾರ್ಯಕ್ರಮ ಏರ್ಪಾಡಾಗಿದೆ. ವಿದ್ಯಾಶ್ರೀ ಪಿ., ಯಶಾ ಜಿ.ಪಿ, ಕೀರ್ತನಾ ಕಿರಣ್‌ ಹಾಗೂ ಚೈತನ್ಯ ಎಸ್‌. ರವರು ನೃತ್ಯವನ್ನು ಪ್ರದರ್ಶಿಸಲಿದ್ದಾರೆ.

Advertisement

ಈ ಸಂದರ್ಭದಲ್ಲಿ “ನೃತ್ಯ ದಿಶಾ’ ಟ್ರಸ್ಟ್‌ನ ಕಲಾತ್ಮಕ ನಿರ್ದೇಶಕಿ, ಸಂಶೋಧಕಿ ಶ್ರೀಮತಿ ದರ್ಶಿನಿ ಮಂಜುನಾಥ್‌, ಯುನೀಕ್‌ ಕನ್ಸ್‌ಲ್ಟೆಂಟ್‌ನ ಮುಖ್ಯಸ್ಥ ಡಾ. ಅಶ್ವಥರಾಮಯ್ಯ ಹಾಗೂ ಮೇಘನಾ ಕೋ. ನ ಸಿಇಓ ಹನುಮೇಶ್‌ ಎಂ.ರವರು  ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಕಲಾಪೋಷಕಿ ಶ್ರೀಮತಿ ಗಿರಿಜಾ ಪಿ. ಗೌರವಾನ್ವಿತ ಅತಿಥಿಗಳಾಗಿ ಉಪಸ್ಥಿತರಿರುವರು. ನಟುವಾಂಗದಲ್ಲಿ ಗುರು ಶ್ರೀಮತಿ ಪದ್ಮ ಹೇಮಂತ್‌, ಗಾಯನದಲ್ಲಿ ಕು. ಶೀತಲ್‌ ಹೇಮಂತ್‌ , ವಿನೋದ್‌ ಆನೂರ್‌- ಮೃದಂಗ , ಬಿ. ಆರ್‌. ಹೇಮಂತ್‌ ಕುಮಾರ್‌- ವಯೋಲಿನ್‌, ಗಣೇಶ್‌- ಕೊಳಲು ಸಹಕಾರವಿದೆ.

ಎಲ್ಲಿ?: ಸೇವಾ ಸದನ, ಮಲ್ಲೇಶ್ವರ
ಯಾವಾಗ?: ಜುಲೈ 7, ಶನಿವಾರ, ಸಂಜೆ 5.30

Advertisement

Udayavani is now on Telegram. Click here to join our channel and stay updated with the latest news.

Next