Advertisement

ಶಿವಮೊಗ್ಗ: ಮಳೆಗಾಲದ ಮುಂಚೆಯೇ ಗರಿಷ್ಠ ಮಟ್ಟಕ್ಕೆ ತಲುಪಿದ ಗಾಜನೂರು ಜಲಾಶಯ

05:10 PM May 15, 2021 | Team Udayavani |

ಶಿವಮೊಗ್ಗ: ಮಳೆಗಾಲದ ಮುಂಚೆಯೇ ಗಾಜನೂರು ಜಲಾಶಯ ಗರಿಷ್ಠ ಮಟ್ಟ ತಲುಪಿದ್ದು, ಈಗಾಗಲೇ ಪವರ್ ಹೌಸ್ ಮೂಲಕ 500 ಕ್ಯೂಸೆಕ್ಸ್ ನಷ್ಟು ನೀರು ಹೊರಗೆ ಬಿಡಲಾಗಿದೆ.

Advertisement

3.17 ಟಿಎಂಸಿ ಗರಿಷ್ಠ ಮಟ್ಟದ ಅಣೆಕಟ್ಟೆಯಲ್ಲಿ ಪ್ರಸ್ತುತ 2.34 ಟಿಎಂಸಿ ನೀರಿದೆ. ಒಳಹರಿವು 800 ಕ್ಯೂಸೆಕ್ಸ್ ಇದ್ದು ರಾತ್ರಿ ವೇಳೆಗೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಜಲಾಶಯ ಭರ್ತಿಯಾಗಲು ಕೇವಲ 10 ಇಂಚು ಮಾತ್ರ ಬಾಕಿ ಇದೆ. ನದಿ ಪಾತ್ರದ ಮತ್ತು ನಾಲೆ ಪಾತ್ರಗಳ ನಿವಾಸಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಈಗಾಗಲೇ ರೆಡ್ ಅಲರ್ಟ್ ಘೋಷಣೆ ಮಾಡಿದ್ದಾರೆ. ಜಿಲ್ಲೆಯ ಎಲ್ಲಾ ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಎಚ್ಚರಿಕೆಯಿಂದ ಇರಲು ಮತ್ತು ಪರಿಸ್ಥಿತಿ ಎದುರಿಸಲು ಸಿದ್ಧತೆ ಮಾಡಿಕೊಳ್ಳಲು ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next