Advertisement

ಗಗನಯಾನ ಮೈಲುಗಲ್ಲಾಗಲಿದೆ: ಇಸ್ರೋ ಅಧ್ಯಕ್ಷ ಡಾ.ಎಸ್‌.ಸೋಮನಾಥ್‌

11:03 PM Jan 13, 2022 | Team Udayavani |

ನವದೆಹಲಿ: ಇಸ್ರೋ ಶೀಘ್ರದಲ್ಲಿಯೇ ಕೈಗೆತ್ತಿಕೊಳ್ಳಲಿರುವ ಗಗನಯಾನ ದೇಶಕ್ಕೆ ಅತ್ಯಂತ ಮಹತ್ವದ ಸ್ಥಾನ ತಂದುಕೊಡಲಿದೆ ಎಂದು ಸಂಸ್ಥೆಯ ನೂತನ ಅಧ್ಯಕ್ಷ ಡಾ.ಎಸ್‌.ಸೋಮನಾಥ್‌ ಹೇಳಿದ್ದಾರೆ.

Advertisement

“ನ್ಯೂಸ್‌-18′ ಜತೆಗೆ ಮಾತನಾಡಿದ ಅವರು, ಈ ಯೋಜನೆಯಿಂದ ಗಗನಯಾನ ಉದ್ದಿಮೆಯಲ್ಲಿ ದೇಶಕ್ಕೆ ಹೆಚ್ಚಿನ ಅವಕಾಶ ಲಭ್ಯವಾಗಲಿದೆ ಎಂದಿದ್ದಾರೆ.

ಇಸ್ರೋ ಕೈಗೊಳ್ಳಲಿರುವ ಗಗನಯಾನ ಯೋಜನೆಯಿಂದ ಕ್ರಯೋಜೆನಿಕ್‌ ಎಂಜಿನ್‌ ಬಳಕೆಯಲ್ಲಿ ಕೂಡ ನಮ್ಮ ಸಾಮರ್ಥ್ಯದ ಪರೀಕ್ಷೆಯೂ ನಡೆಯಲಿದೆ ಎಂದಿದ್ದಾರೆ. ಅದರಿಂದ ದೇಶ ತಾಂತ್ರಿಕ ಕ್ಷೇತ್ರದಲ್ಲಿ ಹೊಂದಿರುವ ಪರಿಣತಿಯೂ ಮತ್ತಷ್ಟು ದೃಢವಾಗಲಿದೆ. ಬಾಹ್ಯ ಬೆಂಬಲದಿಂದ ತಂತ್ರ ರೂಪಿಸುವುದಕ್ಕೆ ಕಷ್ಟವಾಗುವ ಹಂತದಲ್ಲಿ ದೇಶಿಯವಾಗಿರುವ ವಿಧಾನ ವನ್ನೇ ಬಳಕೆ ಮಾಡಿಕೊಂಡು ಕ್ರಯೋಜೆನಿಕ್‌ ಸೇರಿದಂತೆ ಹಲವು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಡಾ.ಸೋಮನಾಥ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next