Advertisement

ಹೆದ್ದಾರಿ ಟೋಲ್‌ ವಿನಾಯಿತಿ ಅಸಾಧ್ಯ: ನಿತಿನ್‌ ಗಡ್ಕರಿ

11:53 AM Jan 02, 2018 | Team Udayavani |

ಪುಣೆ : ”ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್‌ ಸಂಗ್ರಹದಿಂದ ಯಾರಿಗೂ ವಿನಾಯಿತಿ ನೀಡಲು ಸಾಧ್ಯವಿಲ್ಲ; ಒಳ್ಳೆಯ ರಸ್ತೆ, ಒಳ್ಳೆಯ ಸೇವೆ ಬೇಕೆನ್ನುವವರು ಅದಕ್ಕೆ ಹಣ ಪಾವತಿಸಲೇ ಬೇಕು” ಎಂದು ಕೇಂದ್ರ ರಸ್ತೆ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

Advertisement

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್‌ ಸಂಗ್ರಹ ನಿಲ್ಲಬೇಕು ಎಂಬ ಜನಾಭಿಪ್ರಾಯವನ್ನು ನಾನು ಒಪ್ಪುತ್ತೇನೆ; ಆದರೆ ಈ ಸಂದರ್ಭದಲ್ಲಿ ಈ ವಿಷಯದಲ್ಲಿ ನಾನು ಯಾವುದೇ ತೆರಿಗೆ ರಿಯಾಯಿತಿಯ ಭರವಸೆ ನೀಡಲಾರೆ ಎಂದು ಗಡ್ಕರಿ ಖಂಡತುಂಡವಾಗಿ ಹೇಳಿದರು. 

ಟೋಲ್‌ ಸಂಗ್ರಹಿಸುವ ಪದ್ಧತಿ ವಿಶ್ವಾದ್ಯಂತ ಇದೆ; ಒಳ್ಳೆಯ ರಸ್ತೆಗಳಿಂದ ಮೋಟಾರು ವಾಹನಗಳಿಗೆ ಅನುಕೂಲವಾಗುತ್ತದೆ; ಇಂಧನ ಉಳಿಯುತ್ತದೆ. ಅಂತಿರುವಾಗ ಒಳ್ಳೆಯ ರಸ್ತೆ, ಒಳ್ಳೆಯ ಸೇವೆ ಬೇಕೆಂದು ಬಯಸುವವರು ಅದಕ್ಕೆ ಹಣ ಪಾವತಿಸಲೇಬೇಕಾಗುತ್ತದೆ ಎಂದು ಗಡ್ಕರಿ ಅವರು ಮರಾಠಿ ಕವಿ ರಾಮದಾಸ್‌ ಫ‌ೂತನೆ ಅವರಿಗೆ ನೀಡಿದ ಸಂದರ್ಶನದಲ್ಲಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next