Advertisement

ಹಿಂಜರಿತ ಪ್ರಕ್ರಿಯೆಗೆ “ಕಭೀ ಖುಷಿ, ಕಭೀ ಘಂ’ಎಂದ ಸಚಿವ ಗಡ್ಕರಿ

10:27 AM Sep 17, 2019 | Team Udayavani |

ನಾಗ್ಪುರ/ಮುಂಬೈ: ವಾಹನ ಉದ್ಯಮದಲ್ಲಿ ಕಾಣಿಸಿಕೊಂಡಿರುವ ಹಿಂಜರಿತದ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ವಿಶೇಷ ವ್ಯಾಖ್ಯಾನ ಮಾಡಿದ್ದಾರೆ. ಬಾಲಿವುಡ್‌ನ‌ ಜನಪ್ರಿಯ ಹಾಡು ಕಭೀ ಖುಷಿ, ಕಭೀ ಘಂ (ಕೆಲವು ಬಾರಿ ಖುಷಿ, ಕೆಲವು ಬಾರಿ ದುಃಖ) ಅನ್ನು ನೆನಪಿಸಿದ ಅವರು, ಕೆಲವು ಬಾರಿ ಯಶಸ್ವಿಯಾಗುತ್ತೀರಿ, ಇನ್ನೂ ಕೆಲವು ಬಾರಿ ವಿಫ‌ಲವಾಗುತ್ತೀರಿ. ಜೀವನ ಎಂಬುದು ಒಂದು ವೃತ್ತದ ಹಾಗೆ ಎಂದಿದ್ದಾರೆ.

Advertisement

ನಾಗ್ಪುರದಲ್ಲಿ ಮಾತನಾಡಿದ ಅವರು, ಜಾಗತಿಕ ಆರ್ಥಿಕ ಕುಸಿತ, ಬೇಡಿಕೆ ಮತ್ತು ಪೂರೈಕೆ ಕುಸಿತ ಹಾಗೂ ವಹಿವಾಟು ಸರಣಿಯಲ್ಲಿ ಸಮಸ್ಯೆಯಾಗಿದೆ. ಇದರಿಂದ ಬೇಸರಿಸಿಕೊಳ್ಳಬೇಡಿ. ಈ ಸಮಸ್ಯೆ ಶೀಘ್ರ ಪರಿಹಾರವಾಗುತ್ತದೆ ಎಂದಿದ್ದಾರೆ.

17 ದಿನ ಸ್ಥಗಿತ: ಮಾರಾಟ ಮತ್ತು ಉತ್ಪಾದನೆಯಲ್ಲಿ ಸಮತೋಲನ ಸಾಧಿಸುವುದಕ್ಕಾಗಿ ಈ ತ್ತೈಮಾಸಿಕದಲ್ಲಿ 8 ರಿಂದ 17 ದಿನಗಳವರೆಗೆ ಉತ್ಪಾದನೆ ಘಟಕಗಳನ್ನು ಸ್ಥಗಿತಗೊಳಿಸಲಿದ್ದೇವೆ ಎಂದು ಮಹಿಂದ್ರಾ ಆ್ಯಂಡ್‌ ಮಹಿಂದ್ರಾ ತಿಳಿಸಿದೆ. ಜುಲೈ ಸೆಪ್ಟೆಂಬರ್‌ ತ್ತೈಮಾಸಿಕದಲ್ಲಿ 8 ರಿಂದ 14 ದಿನಗಳವರೆಗೆ ಘಟಕ ಸ್ಥಗಿತಗೊಳಿಸಲಾಗುತ್ತದೆ ಎಂದು ಹೇಳಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next