Advertisement

ಡಿ.ರಾಂಪುರದಲ್ಲಿ ಗಡಿನಾಡು ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ

06:10 PM Jan 03, 2022 | Team Udayavani |

 ರಾಯಚೂರು: ಆತ್ಮೂರು ಗ್ರಾಪಂ ವ್ಯಾಪ್ತಿಯ ಡಿ.ರಾಂಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಂಗಸಿರಿ ಸಾಂಸ್ಕೃತಿಕ ಕಲಾ ಬಳಗ ಹಾಗೂ ಬೆಂಗಳೂರಿನ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಗಡಿನಾಡು ಸಾಂಸ್ಕೃತಿಕ ಉತ್ಸವ, ಸಂಗೀತ, ನೃತ್ಯ, ನಾಟಕ ಕಾರ್ಯಕ್ರಮ ಜರುಗಿತು.

Advertisement

ರಾಯಚೂರು ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಡಿ.ಅಚ್ಯುತರಾವ್‌ ಕಾರ್ಯಕ್ರಮ ಉದ್ಘಾಟಿಸಿ, ಗಡಿನಾಡು ಭಾಗಗಳಲ್ಲಿ ಮಕ್ಕಳು ಮತ್ತು ಜನರು ಬೇರೆ ಭಾಷೆಗಳು ಪ್ರಭಾವಕ್ಕೆ ಒಳಗಾಗದೆ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕಿದೆ. ಕನ್ನಡ ಭಾಷೆ ಮೇಲೆ ಅಭಿಮಾನ ಬೆಳಿಸಿಕೊಂಡಾಗಲೇ ನಮ್ಮ ಅಭಿವೃದ್ಧಿಯೂ ಸಾಧ್ಯವಾಗಲಿದೆ. ಸ್ಥಳೀಯ ಪ್ರತಿಭೆ, ಹಿರಿಯ ಕಲಾವಿದರನ್ನು ಗುರುತಿಸಿ ಸನ್ಮಾನಿಸುತ್ತಿರುವುದು, ಗಡಿ ಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಗ್ರಾಪಂ ಸದಸ್ಯ ಬಿ.ಟಿ. ದೇವಪ್ಪ ಮಾತನಾಡಿ, ರಂಗಭೂಮಿ ಕಲೆಗಳು ಉಳಿಯಬೇಕಾದರೆ ನಾವೆಲ್ಲರೂ ಪ್ರೋತ್ಸಾಹಿಸಬೇಕು ಎಂದರು.

ಹಿರಿಯ ರಂಗಭೂಮಿ ಕಲಾವಿದ ಅನಿವೀರಯ್ಯ ಸ್ವಾಮಿ ಮಾತನಾಡಿದರು. ಕಲಾವಿದರಾದ ಕೆ.ಗೋವಿಂದರೆಡ್ಡಿ, ಬಾಬಣ್ಣ ಹುಗೆನಲ್ಲಿ, ವೆಂಕಟ್ಟರೆಡ್ಡಿ ಗಾಜ್ರಲ್‌. ಈಶ್ವರಯ್ಯ ಯಾಪಲದ್ದಿನ್ನಿ, ಅಕ್ರಂ ಸಾಬ್‌ ಗಂಜಲ್ಲಿ, ವೆಂಕಟೇಶ್‌, ಬಡೆಸಾಬ್‌ ಡಿ. ಅವರನ್ನು ಸನ್ಮಾನಿಸಲಾಯಿತು. ನಂತರ ಸಂಗೀತ, ನೃತ್ಯ ಹಾಗೂ ವೆಂಕಟನರಸಿಂಹಲು ತಂಡದಿಂದ “ದುರಾಸೆಯೇ ದುಃಖಕ್ಕೆ ಮೂಲ’ ನಾಟಕ ಪ್ರದರ್ಶಿಸಲಾಯಿತು. ಸುರೇಶ ನಾಯಕ ಕಲವಲದೊಡ್ಡಿ, ರಮಾದೇವಿ, ವೆಂಕಟರೆಡ್ಡಿ, ಮುರಳಿ ಮೋಹನ್‌ ರೆಡ್ಡಿ, ಕೆ.ಗೋವಿಂಡರೆಡ್ಡಿ, ವೆಂಕಟ ರಾಮುಲು, ದತ್ತಪ್ಪ, ಕರೆಪ್ಪ, ಮೌನೇಶ್‌, ಮೈಲಾರಪ್ಪ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next