Advertisement

ಗಜೇಂದ್ರಗಡದಲ್ಲಿ ನರಿ ಉಪಟಳ; ಸ್ಥಳೀಯರಿಂದ ನರಿ ಮೇಲೆ ಹಲ್ಲೆ

03:12 PM Dec 14, 2022 | Team Udayavani |

ಗದಗ: ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಅವಾಂತರ ಸೃಷ್ಟಿಸಿದ್ದ ನರಿಯನ್ನು ಸ್ಥಳೀಯರು ಅಟ್ಟಿಸಿಕೊಂಡು ಕೊಂದಿರುವ ಘಟನೆ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಬುಧವಾರ (ಡಿ.14) ನಡೆದಿದೆ.

Advertisement

ಬುಧವಾರ ಬೆಳಿಗ್ಗೆ ಗಜೇಂದ್ರಗಡ ಪಟ್ಟಣಕ್ಕೆ ದಾಳಿಯಿಟ್ಟ ನರಿ ಸ್ಥಳೀಯರನ್ನು ಬೆನ್ನಟ್ಟುತ್ತಿದ್ದು, ಹಲವರು ಗಾಯಗೊಂಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ನರಿಯನ್ನು ಅಟ್ಟಾಡಿಸಿಕೊಂಡು ಕೊಂದು ಹಾಕಿದ್ದಾರೆ.

ಮಂಗಳವಾರ ಗದಗ ತಾಲೂಕಿನ ಅಸುಂಡಿ ಗ್ರಾಮದ ಹುಲಕೋಟಿ ಸಹಕಾರ ಸಂಸ್ಥೆಯ ಪ್ರೌಢಶಾಲೆಯ ಆವರಣದಲ್ಲಿ ಆಗಮಿಸಿದ್ದ ನರಿಯೊಂದು ಅವಾಂತರ ಸೃಷ್ಟಿಸಿತ್ತು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಗಾಬರಿಗೊಂಡಿದ್ದರು. ತದನಂತರ ಅರಣ್ಯ ಇಲಾಖೆ ಸಿಬ್ಬಂದಿ ನರಿಯನ್ನು ಬಲೆಯೊಳಗೆ ಸೆರೆ ಹಿಡಿದು ಬಿಂಕದಕಟ್ಟಿ ಮೃಗಾಲಯಕ್ಕೆ ಬಿಟ್ಟಿದ್ದರು.

ಬುಧವಾರ (ಇಂದು) ಗಜೇಂದ್ರಗಡ ಪಟ್ಟಣದಲ್ಲಿ ಸಾರ್ವಜನಿಕ ಮೇಲೆ ದಾಳಿ ನಡೆಸಿದ ನರಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸ್ಥಳೀಯರು ನರಿ ಮೇಲೆ ಹಲ್ಲೆ ನಡೆಸಿ ಕೊಂದು ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next