ಗದಗ: ರಾಜ್ಯ ಸೇರಿ ಜಿಲ್ಲಾದ್ಯಂತ ಮುಂಗಾರು ಜೊತೆಗೆ ಹಿಂಗಾರು ಬರಗಾಲ ಆವರಿಸಿದ್ದರಿಂದ ಜಿಲ್ಲೆಯ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಬಂಗಾರದ ಬೆಲೆಗೆ ಮಾರಾಟವಾಗುತ್ತಿರುವ ಒಣಮೆಣಸಿನಕಾಯಿ ಇಳುವರಿ ಕುಂಠಿತದಿಂದ ರೈತರು ತಲೆ ಮೇಲೆ ಕೈಹೊತ್ತು ಕೂರುವ ಪರಿಸ್ಥಿತಿ ಎದುರಾಗಿದೆ.
Advertisement
ಹೆಸರು, ಕಡಲೆ, ಮೆಕ್ಕೆಜೋಳ ಬೆಳೆದಿದ್ದ ರೈತರು ಬೆಳೆ ಬರದೆ ಸಂಕಷ್ಟ ಅನುಭವಿಸಿದ್ದರು. ಸಧ್ಯ ಒಣಮೆಣಸಿನಕಾಯಿ ಬೆಲೆ ಕುಸಿತದ ಜೊತೆಗೆ, ಬರಗಾಲದಿಂದ ಇಳುವರಿ ಕುಂಠಿತಗೊಂಡಿದ್ದರಿಂದ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ.
Related Articles
ಕೇವಲ 20ರಿಂದ 25 ಟನ್ ಒಣಮೆಣಸಿನಕಾಯಿ ಇಳುವರಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಆದ್ದರಿಂದ ಒಣಮೆಣಸಿನಕಾಯಿ ಬೆಲೆಯಲ್ಲೂ ಅಧಿಕವಾಗುವ ಮುನ್ಸೂಚನೆ ದಟ್ಟವಾಗಿದೆ.
Advertisement
ಮಾರುಕಟ್ಟೆಗೆ 11 ಕ್ವಿಂಟಲ್ ಒಣ ಮೆಣಸಿನಕಾಯಿ ಆವಕ: ಕಳೆದ ಒಂದು ತಿಂಗಳಿನಿಂದ ಅಂದರೆ 2023ರ ಡಿ. 1ರಿಂದ 2024ರ ಜ. 5ರ ವರೆಗೆ ಗದಗ ಎಪಿಎಂಸಿ ಮಾರುಕಟ್ಟೆಗೆ ಕೇವಲ 11,843 ಕ್ವಿಂಟಾಲ್ ಒಣಮೆಣಸಿನಕಾಯಿ ಆವಕ ಆಗಿದೆ. ಅದರಲ್ಲಿ ಕಿcಂಟಾಲ್ ಒಣಮೆಣಸಿನಕಾಯಿಗೆ ಕನಿಷ್ಟ 14,300 ರೂ. ಹಾಗೂ ಗರಿಷ್ಠ 65,899 ರೂ. ಮಾರಾಟವಾಗಿದೆ.ಆದರೆ ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಒಣಮೆಣಸಿನಕಾಯಿ ಕನಿಷ್ಟ ಬೆಲೆಗೆ ಮಾರಾಟವಾಗಿದೆ. ಬರಗಾಲದ ಎಫೆಕ್ಟ್ ಒಣಮೆಣಸಿನಕಾಯಿ ದರಕ್ಕೂ ತಟ್ಟಿದೆ.
ಮೆಣಸಿನಕಾಯಿ ಬೆಳೆ ಸಂರಕ್ಷಿಸಲು ಹರಸಾಹಸ:ಬರಗಾಲದಲ್ಲಿ ಅಷ್ಟಿಷ್ಟು ಬೆಳೆದ ಒಣಮೆಣಸಿನಕಾಯಿಗೆ ಕಳ್ಳರ ಕಾಟ ಶುರುವಾಗಿದೆ. ಒಣಗಿಸಲು ಇಟ್ಟಿರುವ ಹಾಗೂ ಕಟಾವಿಗೆ ಬಂದಿರುವ ಒಣಮೆಣಸಿನಕಾಯಿಯನ್ನು ಕಳ್ಳತನವಾಗಿರುವ ಘಟನೆಗಳು ನಡೆದಿವೆ. ಬರ ಹಿನ್ನೆಲೆಯಲ್ಲಿ ಇಳುವರಿ ಕೊರತೆಯಿಂದ ಸಂಕಷ್ಟದಲ್ಲಿರುವ ರೈತರು ಈಗ ಒಣಮೆಣಸಿನಕಾಯಿಯನ್ನು ಸಂರಕ್ಷಿಸಲು ಪರದಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಗದಗ ಜಿಲ್ಲೆಯಲ್ಲಿ ಒಣಬೇಸಾಯ ಕೃಷಿಯಿದ್ದು, ಅಪಾರ ಪ್ರಮಾಣದಲ್ಲಿ ಸ್ಥಳೀಯ ಹಾಗೂ ಡಬ್ಬಿ ತಳಿಯ ಒಣಮೆಣಸಿಕಾಯಿ ಬೆಳೆಯುತ್ತಾರೆ. ಪ್ರಸಕ್ತ ವರ್ಷ ಬರಗಾಲ ಆವರಿಸಿದ್ದರಿಂದ ಬಿತ್ತನೆ ಕ್ಷೇತ್ರವೂ ಕುಂಠಿತಗೊಂಡಿದೆ. ಬಿತ್ತಿದ ಬೆಳೆಯ
ಇಳುವರಿಯೂ ನೆಲ ಕಚ್ಚಿದೆ. ಆದ್ದರಿಂದ ಪ್ರಸಕ್ತ ವರ್ಷ ಒಣಮೆಣಸಿನಕಾಯಿ ಗ್ರಾಹಕರಿಗೆ ಖಾರವಾಗುವ ಸಾಧ್ಯತೆ ಹೆಚ್ಚಿದೆ.
*ರಾಘವೇಂದ್ರ ಪಾಟೀಲ, ರೋಣ ರೈತ ಪ್ರಸಕ್ತ ವರ್ಷ ಬರಗಾಲ ಆವರಿಸಿದ್ದರ ಪರಿಣಾಮ ಜಿಲ್ಲೆಯಲ್ಲಿ ಒಣಮೆಣಸಿನಕಾಯಿ ಬಿತ್ತನೆಯಲ್ಲಿ ಕುಂಠಿತವಾಗಿದೆ. ಜೊತೆಗೆ ಹೆಕ್ಟೇರ್ಗೆ 0.5 ಟನ್ನಷ್ಟು ಇಳುವರಿ ಕುಸಿತ ಕಂಡಿದೆ. ಗುಣಮಟ್ಟದಲ್ಲೂ ಕೊರತೆ ಕಂಡುಬಂದಿದ್ದರಿಂದ ಬೆಲೆಯಲ್ಲಿ ವ್ಯತ್ಯಾಸ ಕಂಡುಬರುತ್ತಿದೆ.
*ಶಶಿಕಾಂತ ಕೋಟಿಮನಿ,
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಅರುಣಕುಮಾರ ಹಿರೇಮಠ